ಅಕ್ರಮ ಉಂಟಾಗುವಾಗ ಪೊಲೀಸರು ಗುಂಡು ಹಾರಿಸುತ್ತಾರೆ: ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

0
439

ಸನ್ಮಾರ್ಗ ವಾರ್ತೆ-

ಕಲ್ಲಿಕೋಟೆ, ಡಿ. 24: ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಕೇಂದ್ರ ಸಚಿವ ವಿ. ಮುರಳೀಧರನ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಸರಕಾರ ಈ ವಿಷಯದಲ್ಲಿ ಇನ್ನು ಚರ್ಚಿಸುವುದಿಲ್ಲ. ಅಕ್ರಮ ನಡೆದರೆ ಪೊಲೀಸರು ಗುಂಡು ಹಾರಿಸುತ್ತಾರೆ ಎಂದು ಹೇಳಿದರು. ಬೆಳಗ್ಗೆ ಎದ್ದು ಘೋಷಣೆ ಕೂಗುವವರು ಪ್ರತಿಭಟನೆಯ ಹಿಂದಿದ್ದಾರೆ ಎಂದು ಮುರಳೀಧರನ್ ಹೇಳಿದರು.

ಹೇಳಿಕೆ ವಿವಾದವಾಗಿದ್ದು ಎಸ್‍ಎಫ್‍ಐ ಪ್ರತಿಭಟನೆಗಿಳಿದಿದೆ. ಕಲ್ಲಿಕೋಟೆ ಟೌನ್‍ಹಾಲ್‍ನಲ್ಲಿ ಮುರಳೀಧರನ್ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ನುಗ್ಗಿದ ಎಸ್‍ಎಫ್‍ಐ ನಾಯಕರು ಸಚಿವರಿಗೆ ಕಪ್ಪು ಬಾವುಟ ತೋರಿಸಿದರು. ಇವರನ್ನು ಪೊಲೀಸರು ಬಂಧಿಸಿ ತೆರವುಗೊಳಿಸಿದರು. ಆದರೆ, ಪ್ರತಿಭಟನಾಕಾರರೊಂದಿಗೆ ಚರ್ಚಿಸುವುದಿಲ್ಲ. ಅದಕ್ಕೆ ತನಗೆ ಹೊಣೆ ನೀಡಿಲ್ಲ ಎಂದು ನಂತರ ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.