ಮಂಗಳೂರು ಘಟನೆ: ತನ್ನ ಸಂಪಾದಕೀಯ ಪುಟವನ್ನು ಖಾಲಿಬಿಟ್ಟು ವಿರೋಧ ಸೂಚಿಸಿದ ಸನ್ಮಾರ್ಗ ಪತ್ರಿಕೆ

0
1368

ಸನ್ಮಾರ್ಗ ವಾರ್ತೆ-

ಡಿ.19ರಂದು ಮಂಗಳೂರಿನಲ್ಲಿ ನಡೆದ NRC, CAA ವಿರೋಧಿ ಪ್ರತಿಭಟನೆಯನ್ನು ಪೊಲೀಸರು ನಿಭಾಯಿಸಿದ ರೀತಿಗೆ ಅಸಂತೋಷ ಸೂಚಿಸಿ ಸನ್ಮಾರ್ಗ ಪತ್ರಿಕೆಯು ತನ್ನ ಸಂಪಾದಕೀಯ ಪುಟವನ್ನು ಖಾಲಿಬಿಟ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ನಗರದ ಸ್ಟೇಟ್ ಬಾಂಕ್ ಸಮೀಪ ನಡೆದ ಪ್ರತಿಭಟನೆಯು ಅಂತಿಮವಾಗಿ ಪೊಲೀಸ್ ಗೋಲಿಬಾರ್ ಗೆ ಇಬ್ಬರು ಬಲಿಯಾಗುವ ಮೂಲಕ ಕೊನೆಗೊಂಡಿತ್ತು. ಇದರ ನಡುವೆ ಪೊಲೀಸರಿಂದ ಲಾಠಿಚಾರ್ಜ್, ಪ್ರತಿಭಟನಾಕಾರರಿಂದ ಕಲ್ಲುತೂರಾಟ, ಟೈರ್ ಗೆ ಬೆಂಕಿ ಹಚ್ಚುವಿಕೆ, ರಸ್ತೆ ತಡೆ ನಡೆದಿತ್ತಲ್ಲದೆ ಪೊಲೀಸರಿಂದಲೂ ಪ್ರತಿ ಕಲ್ಲುತೂರಾಟ, ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು ಹಾರಾಟ ಮತ್ತು ಕೊನೆಗೆ ಗೋಲಿಬಾರ್ ಕೂಡ ನಡೆದಿತ್ತು.