ಅಣ್ಣಾ ಹಝಾರೆ ಸುರಕ್ಷತೆಯಲ್ಲಿ ಹೆಚ್ಚಳ: ತೆಂಡುಲ್ಕರ್ ಸುರಕ್ಷತೆಗೆ ಭಂಗ

0
646

ಸನ್ಮಾರ್ಗ ವಾರ್ತೆ-

ಮುಂಬೈ, ಡಿ. 25: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರವು ಸಚಿನ್ ತೆಂಡುಲ್ಕರ್ ರ ಎಕ್ಸ್ ಕೆಟಗರಿ ಸುರಕ್ಷತೆಯನ್ನು ವಾಪಸು ಪಡೆದಿದೆ. ಜೊತೆಗೆ ಶಿವಸೇನಾ ಶಾಸಕ ಉದ್ಧವ್ ಠಾಕರೆಯ ಪುತ್ರ ಆದಿತ್ಯ ಠಾಕರೆಯ ಸುರಕ್ಷೆಯನ್ನು ಹೆಚ್ಚಿಸಿದೆ. ಆದಿತ್ಯರಿಗೆ ಮೊದಲು ವೈಪ್ಲಸ್ ಸುರಕ್ಷೆ ಇತ್ತು. ಈಗ ಅದನ್ನು ಝಡ್ ಕೆಟಗರಿಗೇರಿಸಲಾಗಿದೆ. ಮಹಾರಾಷ್ಟ್ರ ಸರಕಾರವು ಅಣ್ಣಾ ಹಝಾರೆಯವರ ಸುರಕ್ಷೆಯನ್ನೂ ಹೆಚ್ಚಿಸಿದೆ. ಈಗ ಅವರಿಗೆ ಝಡ್ ಕೆಟಗರಿ ಸುರಕ್ಷೆ ನೀಡಲಾಗಿದೆ.