ತರೆದ ಬದರಿನಾಥ ಮಂದಿರ; ತೀರ್ಥಯಾತ್ರಿಕರಿಗೆ ದರ್ಶನ ನಿಷೇಧ

0
348

ಸನ್ಮಾರ್ಗ ವಾರ್ತೆ

ಚಮೇಲಿ,ಮೇ.15: ಉತ್ತರಾಖಂಡದ ಪ್ರಸಿದ್ಧ ಬದರೀನಾಥ ಮಂದಿರ ತೆರೆಯಲಾಗಿದ್ದು ಕಾರ್ಯಕ್ರಮದಲ್ಲಿ ಪುರೋಹಿತರ ಉಪಸ್ಥಿತಿಯಲ್ಲಿ 28 ಮಂದಿಗೆ ಮಾತ್ರ ಇದ್ದರು. ಕೊರೋನಾ ಹಿನ್ನೆಲೆಯಲ್ಲಿ ಮಂದಿರಕ್ಕೆ ತೀರ್ಥಯಾತ್ರಿಕರು ಸಂದರ್ಶಿಸದಂತೆ ಪ್ರವೇಶ ನಿಷೇಧಿಸಲಾಗಿದೆ.

ಜನರ ಸಂರಕ್ಷಣೆ, ಸುರಕ್ಷೆಗಾಗಿ ಪ್ರಾರ್ಥನೆಗಳು ಜರಗಲಿವೆ ಎಂದು ಮಂದಿರ ಧರಂ ಅದಿಕಾರಿ ಬುವಾಲ್ ಚಂದ್ರ ಉನಿಯಾಲ್ ಹೇಳಿದರು.

ಆರು ತಿಂಗಳಿನಿಂದ ಚಳಿಗಾಲದ ರಜೆಯ ಬಳಿಕ ಎಲ್ಲ ವರ್ಷ ಬದರಿನಾಥ ಮಂದಿರ ತೆರೆಯಲಾಗುತ್ತದೆ. ಇದೇ ರೀತಿಯ ಮಧ್ಯಂತರದ ನಂತರ ಎಪ್ರಿಲ್ 29ಕ್ಕೆ ಕೇದರನಾಥ ಮಂದಿರವನ್ನು ತೆರೆಯಲಾಗಿತ್ತು.