ಕುವೈಟ್‍: ಕೊರೋನಾ ಪಾಸಿಟಿವ್ ಎಂದು ತಿಳಿದು ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿ; ಕೆಎಂಸಿಸಿ ಸಂಘಟನೆ ನೆರವು

0
1405

ಸನ್ಮಾರ್ಗ ವಾರ್ತೆ

ಕುವೈಟ್‍ ಸಿಟಿ,ಮೇ.15:ತನಗೆ ಕೊರೋನಾ ಬಾಧಿಸಿದೆ ಎಂಬುದನ್ನು ತಿಳಿದು ಮಾನಸಿಕವಾಗಿ ಅಸ್ವಸ್ಥನಾಗಿದ್ದ ವ್ಯಕ್ತಿಗೆ ಕುವೈಟ್‍ನ ಕೆಎಂಸಿಸಿ ಸಂಘಟನೆ ನೆರವಿಗೆ ಧಾವಿಸಿದೆ. ಕಳೆದ ಕೆಲವು ದಿವಸಗಳಿಂದ ಜ್ವರ ಮತ್ತು ಹಲವು ರೋಗ ಲಕ್ಷಣಗಳಿಂದ ಕಷ್ಟಪಡುತ್ತಿದ್ದ ವ್ಯಕ್ತಿಯನ್ನು ಕಳೆದ ದಿವಸ ಕೊರೋನಾ ಪರೀಕ್ಷೆಗೆ ಗುರಿಪಡಿಸಲಾಗಿತ್ತು.

ಪರೀಕ್ಷಾ ಫಲಿತಾಂಶ ಪಾಸಿಟಿವ್ ಎಂದು ವ್ಯಕ್ತಿಗೆ ತಿಳಿದ ನಂತರ ಮಾನಸಿಕ ಸ್ವಾಸ್ಥ್ಯವನ್ನು ಆತ ಕಳೆದುಕೊಂಡಿದ್ದು ತಪ್ಪು ತಪ್ಪಾಗಿ ವರ್ತಿಸತೊಡಗಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲು ರೂಮ್‌ಮೇಟ್ಸ್‌ಗಳು ಆಂಬುಲೆನ್ಸ್‌ಗೆ ಕರೆಮಾಡಿ ಕೆಲವು ಗಂಟೆ ಕಳೆದರೂ ಆಂಬುಲೆನ್ಸ‌ನ್ನು ತರಿಸಿಕೊಳ್ಳಲು ಆಗಿರಲಿಲ್ಲ.

ನಂತರ ಮಧ್ಯ, ರಾತ್ರಿ ಕಲ್ಲಿಕೋಟೆ ಕೆಎಂಸಿಸಿ ವಿಭಾಗದ ಆಧ್ಯಕ್ಷ ಫಾಸಿಲ್ ಕೊಲ್ಲಂ, ಮೆಡಿಕಲ್ ವಿಂಗ್ ಉಪಾಧ್ಯಕ್ಷ ನಿಹಾಸ್ ವಾಣಿಮೇಲ್, ಹೆಲ್ಪ್ ಡೆಸ್ಕ್ ತಂಡದ ಸದಸ್ಯ ಸಲೀಂ ನಿಲಂಬೂರ್ ಮೊದಲಾದವರ ಪ್ರಯತ್ನದಲ್ಲಿ ವ್ಯಕ್ತಿಯನ್ನು ಆಸ್ಪತೆಗೆ ತಲುಪಿಸಲಾಗಿತ್ತು. ಮೆಡಿಕಲ್ ವಿಂಗ್ ಟೀಂ ಲೀಡರ್ ಅನಸ್ ತಯ್ಯಿಲ್ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಿದ್ದಾರೆ.