ಸಿಟಿ ರವಿ ಓರ್ವ ಅಜ್ಞಾನಿ: ವೆಲ್ಫೇರ್ ಪಾರ್ಟಿ

0
687

ಸನ್ಮಾರ್ಗ ವಾರ್ತೆ

ಬೆಂಗಳೂರು: ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂದು ಹೇಳುವ ಮೂಲಕ ಸಿಟಿ ರವಿ ನಾನು ಒಬ್ಬ ಅಜ್ಞಾನಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾತ್ರ ವಿಲ್ಲದ, ದೇಶದ ಸ್ವಾತಂತ್ರ್ಯ ಚರಿತ್ರೆ ಗೊತ್ತಿಲ್ಲದ, ಕೋಮು ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿಯನ್ನು ಭಂಗ ಮಾಡುವ ಕೆಲಸ ರವಿ ಮಾಡುತ್ತಿದ್ದಾರೆ.

ಧರ್ಮಗ್ರಂಥಗಳು ಮನುಷ್ಯರಿಗೆ ದ್ವೇಷ ಕಲಿಸುವುದಿಲ್ಲ ಬದಲಿಗೆ ಎಲ್ಲ ಧರ್ಮಗಳನ್ನು ಗೌರವಿಸುವುದನ್ನು ಕಲಿಸುತ್ತದೆ, ಈ ಸಾಮನ್ಯ ಪರಿಜ್ಞಾನ ಇಲ್ಲದ ಸಿಟಿ ರವಿಗೆ ಬುಧ್ಧ, ಬಸವಣ್ಣ, ಅಂಬೇಡ್ಕರ್‌ರವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಅವರು ಹೇಳಿದರು.

ಮದರಸ ಮತ್ತು ಧರ್ಮ ಗ್ರಂಥಗಳಿಂದ ಪ್ರೇರಣೆ ಪಡೆದು ಸಾವಿರಾರು ಉಲಮಾಗಳು ಭಾರತದ ಸ್ವತಂತ್ರ ಹೋರಾಟದಲ್ಲಿ ತನ್ನ ಜೀವ ಬಲಿದಾನ ಕೊಟ್ಟಿದ್ದಾರೆ, ಬ್ರಿಟಿಷರ ದೌರ್ಜನ್ಯದಿಂದ ಹೆದರಿ ಯಾರೂ ಕೂಡ ಕ್ಷಮೆಯಾಚನೆ ಮಾಡಿ ಓಡಿ ಹೋಗಿಲ್ಲ. ಈ ಇತಿಹಾಸ ಗೊತ್ತಿಲ್ಲದೆ ಬಾಯಿಗೆ ಬಂದಂತೆ ಧರ್ಮಗಳ ಬಗ್ಗೆ, ಧರ್ಮ ಗ್ರಂಥಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅವರು ಎಚ್ಚರಿಸಿದರು.