ಸನ್ಮಾರ್ಗ ವಾರ್ತೆ
ಚಂಪಾವತ್: ಉತ್ತರಾಖಂಡದ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ತಯಾರಿಸಿದ ಮಧ್ಯಾಹ್ನದ ಬಿಸಿಯೂಟ ಸೇವಿಸದ ಹಿನ್ನೆಲೆಯಲ್ಲಿ ದಲಿತ ಮಹಿಳೆಯ ನೇಮಕಾತಿಯನ್ನು ಬುಧವಾರ ರದ್ದುಪಡಿಸಲಾಗಿದೆ.
ನೇಮಕಾತಿ ರದ್ದತಿಯ ಕುರಿತು ಚಂಪಾವತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್ಸಿ ಪುರೋಹಿತ್ ಈ ಕುರಿತು ಮಾಹಿತಿ ನೀಡಿದ್ದು, “ಪ್ರಾಂಶುಪಾಲರು ನೇಮಕಾತಿಯ ನಿಯಮಾವಳಿಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂಬುದನ್ನು ನಾವು ವಿಚಾರಣೆಯ ಸಂದರ್ಭದಲ್ಲಿ ಕಂಡುಕೊಂಡಿದ್ದೇವೆ” ಎಂದು ಹೇಳಿದರು. ಗಮನಾರ್ಹವೆಂದರೆ, ಸುನೀತಾ ದೇವಿಯವರ ನೇಮಕಾತಿಯ ನಂತರ ಹೆಚ್ಚಿನ ಮೇಲ್ಜಾತಿಯ ವಿದ್ಯಾರ್ಥಿಗಳು ಊಟವನ್ನು ಸೇವಿಸುವುದನ್ನು ನಿಲ್ಲಿಸಿದ್ದರು ಮತ್ತು ಹೆತ್ತವರ ಒತ್ತಡದಿಂದಾಗಿ ಮನೆಯಿಂದಲೇ ಟಿಫಿನ್ ತರಲು ಪ್ರಾರಂಭಿಸಿದ್ದರು.