ಮಂಗಳೂರು ಸಿಟಿ ಬಸ್‌ನಲ್ಲಿ ಸಿಕ್ಕ ಹಣವನ್ನು ಪೊಲೀಸ್ ಕಮಿಷನರ್ ಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್-ಡ್ರೈವರ್: ಶ್ಲಾಘನೆ

0
417

ಸನ್ಮಾರ್ಗ ವಾರ್ತೆ

ಮಂಗಳೂರು: ನಗರದ ಸಿಟಿ ಬಸ್‌ನಲ್ಲಿ ಪ್ರಯಾಣಿಕರೋರ್ವರು ಬಿಟ್ಟು ಹೋದ ಹಣವನ್ನು ಪ್ರಾಮಾಣಿಕವಾಗಿ ನಗರದ ಪೊಲೀಸ್ ಕಮಿಷನರಿಗೆ ನಗರದ ಸಿಟಿ ಬಸ್‌ ಚಾಲಕ ಮತ್ತು ನಿರ್ವಾಹಕ ಒಪ್ಪಿಸಿದ ಘಟನೆ ಮಂಗಳೂರಲ್ಲಿಂದು ನಡೆದಿದೆ.

ತಲಪಾಡಿ ಮಾರ್ಗದಲ್ಲಿ ಸಂಚರಿಸುವ ಮಹೇಶ್ ಮೋಟಾರ್ಸ್ ಸಂಸ್ಥೆಗೆ ಸೇರಿದ ಸಿಟಿ ಬಸ್ ಸಂಖ್ಯೆ 42 ನಂಬ್ರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು 10 ಸಾವಿರ ರೂಪಾಯಿಗಳ ನಗದನ್ನು ಬಸ್ಸಿನಲ್ಲೇ ಬಿಟ್ಟು ಹೋಗಿದ್ದರು. ತೊಕ್ಕೊಟ್ಟುವಿನಲ್ಲಿ ಬಸ್‌ ಸೀಟಿನಲ್ಲಿದ್ದ ಈ ಹಣವನ್ನು ಗಮನಿಸಿದ ಬಸ್ ನಿರ್ವಾಹಕ ಅಲ್ತಾಫ್ ಮತ್ತು ಚಾಲಕ ದಿನಕರ್ ಅವರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಪೊಲೀಸ್ ಕಮಿಷನರ್ ಎನ್ . ಶಶಿ ಕುಮಾರ್ ರಿಗೆ ಹಸ್ತಾಂತರ ಮಾಡಿದ್ದಾರೆ.

ಬಸ್ ಸಿಬ್ಬಂದಿಯ ಪ್ರಾಮಾಣಿಕತೆಗೆ ಪೊಲೀಸ್ ಕಮಿಷನರ್ ಶ್ಲಾಘನೆ ವ್ಯಕಪಡಿಸಿದ್ದಾರೆ. ಸದ್ಯ ಹಣ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದು ಸಂಬಂಧಪಟ್ಟವರು ಮಾಹಿತಿ ನೀಡಿ ಪಡೆದುಕೊಳ್ಳಲು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.