ಸನ್ಮಾರ್ಗ ವಾರ್ತೆ
ದುಬೈ: ಅನಿವಾಸಿ ಭಾರತೀಯರ ಆಶಾಕಿರಣವಾದ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಆಶ್ರಯದಲ್ಲಿ ಡಿಸೆಂಬರ್ 24 ರಂದು ಬೃಹತ್ ಯಶಸ್ವಿ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ರಕ್ತನಿಧಿ ದುಬೈಯಲ್ಲಿ ನಡೆಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 113 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ ಇದರ ಅಧ್ಯಕ್ಷರಾದ ಶಂಸುದ್ದೀನ್ ಉಡುಪಿ, (AKO) ಸಮಿತಿ ಸದಸ್ಯರಾದ ವಾಸಿಂ ಹೊನ್ನಾಳ, ಶಾಫಿ ಬಜ್ಪೆ, ಅಲಿ ನೀರ್ಮಾರ್ಗ, ಬದ್ರು ಸುಳ್ಯ ಉಪಸ್ಥಿತರಿದ್ದರು ರಕ್ತದಾನ ಶಿಬಿರದ ಉಸ್ತುವಾರಿಗಳಾಗಿ ಕೆ.ಕೆ.ಜಬ್ಬಾರ್ ಕಲ್ಲಡ್ಕ, ರಿಯಾಝ್ ಜೋಕಟ್ಟೆ ವಹಿಸಿದರು ಅದೇ ರೀತಿ AKOನ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು. ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳಿಗೆ, ರಕ್ತದಾನಿಗಳಿಗೆ, ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ ನಿಸಾರ್ ಆಲಡ್ಕರವರು ಸ್ವಾಗತಿಸಿ ವಂದಿಸಿದರು.