‘ಕುತುಬ್ ಮಿನಾರ್’‌‌ನ್ನು ‘ವಿಷ್ಣು ಸ್ತಂಭ’ವೆಂದು ನಾಮಕರಣ ಮಾಡಿ: ಹಿಂದುತ್ವ ಸಂಘಟನೆಗಳಿಂದ ಪ್ರತಿಭಟನೆ

0
340

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಇತಿಹಾಸ ಪ್ರಸಿದ್ಧ ಸ್ಮಾರಕ ಕುತುಬ್ ಮಿನಾರಿನ ಹೆಸರನ್ನು ವಿಷ್ಣು ಸ್ತಂಭ ಮಾಡಬೇಕೆಂದು ಆಗ್ರಹಿಸಿ ಹಿಂದುತ್ವವಾದಿ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಮಂಗಳವಾರ ಬೆಳಗ್ಗೆ ನಡೆದ ಘಟನೆ ಇದು. ಮಹಾಕಾಲ್ ಮಾನವ್ ಸೇವ್ ಸಹಿತ ಹಿಂದುತ್ವವಾದಿ ಸಂಘಟನೆಗಳ ನೇತೃತ್ವದಲ್ಲಿ ಕುತುಬ್ ಮಿನಾರಿನ ಮುಂದೆ ಪ್ಲಕಾರ್ಡ್ ಹಿಡಿಯಲಾಯಿತು ಹಾಗೂ ಹನುಮಾನ್ ಚಾಲಿಸ ಪಠಿಸಲಾಯಿತು.

ಇದೇ ವೇಳೆ ರಾಜಧಾನಿ ಅಕ್ಬರ್ ರಸ್ತೆ, ಹುಮಯೂನ್ ರಸ್ತೆ, ಔರಂಗಝೇಬ್ ಲೇನ್, ತುಗ್ಲಕ್ ಲೇನ್, ಮೊಗಲ್ ಅಧಿಕಾರಿಗಳ ಹೆಸರಿರುವ ಸ್ಥಳಗಳನ್ನೂ ಮರುನಾಮಕರಣ ಮಾಡಬೇಕೆಂದು ಬಿಜೆಪಿ ದಿಲ್ಲಿ ಘಟಕ ಈಗಾಗಲೇ ರಂಗಪ್ರವೇಶಿಸಿವೆ.

ಮಹಾರಾಣಾ ಪ್ರತಾಪ, ಗುರುಗೋವಿಂದ್ ಸಿಂಗ್, ಮಹರ್ಷಿ ವಾಲ್ಮಿಕಿ, ಜನರಲ್ ವಿಪಿನ್ ರಾವತ್‍ರ ಹೆಸರನ್ನು ಇಡಬೇಕೆಂದು ಹೇಳುತ್ತಿವೆ. ಹೆಸರು ಬದಲಾವಣೆಗಾಗಿ ಉತ್ತರ ಮುನ್ಸಿಪಲ್ ಕಾರ್ಪೊರೇಷನ್‍ಗೆ ಪತ್ರ ಬರೆದಿರುವುದಾಗಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತ ಹೇಳಿದರು.