ಮತಪ್ರಭಾಷಣಗಳು ಹಣಕ್ಕಾಗಿ ಆಗಬಾರದು: ಜಿಫ್ರಿ ತಂಙಳ್‍ರವರ ಭಾಷಣ ವೈರಲ್

0
1715

ಮಲಪ್ಪುರಂ: ಹಣಕ್ಕಾಗಿ ಮಾತ್ರ ಮಾಡುವ ಭಾಷಣ ಸರಣಿಗಳನ್ನು ಸಮಸ್ತ ಕೇರಳ ಇಮ್‍ಇಯ್ಯತ್ತುಲ್ ಉಲೇಮ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಆಕ್ಷೇಪಿಸಿದ್ದಾರೆ. ಮಲಪ್ಪುರಂನ ಆಲತ್ತೂರ್ ಪಡಿಯ ದರ್ಸ್ ವಾರ್ಷಿಕ ಕಾರ್ಯಕ್ರಮದ ವೇದಿಕೆಯಲ್ಲಿ ಈ ವಿಷಯವನ್ನು ಉದ್ಧರಿಸಿ ಭಾಷಣ ಮಾಡಿದರು.

ಏಜೆಂಟುಗಳನ್ನು ಮಾಡಿಕೊಂಡು ಮತಪ್ರಭಾಷಣಕ್ಕಾಗಿ ಹಣ ಸಂಗ್ರಹಿಸುವುದನ್ನು ಅವರು ಟೀಕಿಸಿದರು. ತಂಙಳ್‍ರ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಿಂದಿನ ವಿದ್ವಾಂಸರು ಹಣಕ್ಕಾಗಿ ಭಾಷಣ ಮಾಡುತ್ತಿರಲಿಲ್ಲ. ಅದು ಒಳ್ಳೆಯ ಸ್ವಭಾವವೂ ಅಲ್ಲ ಎಂದು ತಂಙಳ್ ಹೇಳಿದ್ದು ವೀಡಿಯೊದಲ್ಲಿದೆ.