ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ಹಾಕಿ- ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

0
553

ಹೊಸದಿಲ್ಲಿ: ಪುಲ್ವಾಮದಲ್ಲಿ ಭಯೋತ್ಪಾದನಾ ದಾಳಿಯನ್ನು ದುರಂತ ಎಂದು ಹೇಳಿದ್ದಕ್ಕಾಗಿ ತನ್ನುನ್ನು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಧೈರ್ಯವಿದ್ದರೆ ತನ್ನ ವಿರುದ್ಧ ಕೇಸು ಹಾಕಿ ಎಂದು ಸವಾಲೆಸದಿದ್ದಾರೆ.

ಬಾಲಕೋಟ್ ವಿಷಯದಲ್ಲಿ ಟ್ವೀಟ್ ಮಾಡಿದ್ದಕ್ಕೆ ನಿಮ್ಮ ಸಚಿವರು ನನ್ನನ್ನು ದೇಶ ದ್ರೋಹಿ, ಪಾಕಿಸಾನ ಪರ ಎಂದು ಚಿತ್ರಿಸುತ್ತಿದ್ದಾರೆ. ಕೇಂದ್ರ ಸರಕಾರ ಅಧಿಕಾರ ಹೊಂದಿದ ದಿಲ್ಲಿಯಲ್ಲಿ ನಾನು ಟ್ವೀಟ್ ಮಾಡಿದ್ದೇನೆ. ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ಹಾಕಿ ಎಂದು ದಿಗ್ವಿಜಯ ಸಿಂಗ್ ಹೇಳಿದರು.

ಕಳೆದ ದಿವಸ ಅವರು ಪುಲ್ವಾಮ ಭಯೋತ್ಪಾದನ ದಾಳಿಯನ್ನು ದುರಂತ ಎಂದು ಕರೆದು ಟ್ವೀಟ್ ಮಾಡಿದ್ದರು. ನಂತರ ಬಾಲಕೋಟ್ ವಾಯುಸೇನೆ ದಾಳಿಯ ಕುರಿತು ವಿದೇಶಿ ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ ಎಂದಿದ್ದರು. ಇದಕ್ಕೆ ಸರಕಾರ ಉತ್ತರಿಸಬೇಕಾಗಿದೆ ಎಂದು ಅವರು ಟ್ವೀಟ್ ಮೂಲಕ ಸವಾಲು ಹಾಕಿದ್ದರು.

ದಿಗ್ವಿಜಯ್ ಸಿಂಗ್‍ರನ್ನು ಕೇಂದ್ರ ಸಚಿವ ವಿಕೆ ಸಿಂಗ್ ಕಟುವಾಗಿ ಟೀಕಿಸಿದ್ದು ಭಯೋತ್ಪಾದನಾ ದಾಳಿಯನ್ನು ದುರಂತ ಎಂದು ಬಣ್ಣಿಸಿ ರಾಜಕೀಕರಿಸುವುದರಿಂದ ಪ್ರಯೋಜನವಿಲ್ಲ, ರಾಜೀವ್ ಗಾಂಧಿ ಹತ್ಯೆಯನ್ನು ದಿಗ್ವಿಜಯ್ ಸಿಂಗ್ ದುರಂತ ಎಂದು ಹೇಳುವರೇ ಎಂದು ಪ್ರಶ್ನಿಸಿದ್ದರು.