ಪ್ರಿಯಾಂಕಾ ಗಾಂಧಿ ಶನಿವಾರ ವಯನಾಡಿಗೆ

0
1230

ವಯನಾಡ್,ಎ.18: ಲೋಕಸಭಾ ಚುನಾವಣೆಯ ಎರಡನೆ ಹಂತದ ಪ್ರಚಾರಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಶನಿವಾರ ವಯನಾಡಿಗೆ ಆಗಮಿಸಲಿದ್ದಾರೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿರುವರು.

ಶನಿವಾರ ಬೆಳಗ್ಗೆ ಹತ್ತುಗಂಟೆಗೆ ಕಣ್ಣೂರ್ ವಿಮಾನನಿಲ್ದಾಣದಲ್ಲಿ ಬಂದಿಳಿಯುವ ಅವರು 10:30ಕ್ಕೆ ಮಾನಂದವಾಡಿಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತಾಡಲಿದ್ದಾರೆ. ಅದರ ನಂತರ ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ವೀರಮೃತ್ಯುವನ್ನಪ್ಪಿದ ಸಿಆರ್‍ಪಿಎಫ್ ಜವಾನ ವಸಂತ್‍ಕುಮಾರರ ಕುಟಂಬವನ್ನು ಭೇಟಿ ಮಾಡಲಿದ್ದಾರೆ.

ನಂತರ ಒಂದೂವರೆ ಗಂಟೆಗೆ ಪುಲ್‍ಪ್ಪಳ್ಳಿಯಲಿ ರೈತ ಸಂಗಮದಲ್ಲಿ ಭಾಗವಹಿಸುತ್ತಾರೆ. ಮೂರುಗಂಟೆಗೆ ನಿಲಂಬೂರಿನಲ್ಲಿ, ನಾಲ್ಕು ಗಂಟೆಗೆ ಅರೀಕ್ಕೋಡಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಿಯಾಂಕಾ ಮಾತಾಡಲಿದ್ದಾರೆ.