ಸನ್ಮಾರ್ಗ ವಾರ್ತೆ
ಅಧಿಕಾರಕ್ಕೆ ಬಂದ ತಕ್ಷಣ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಧ್ಯಮಗಳ ಮೇಲೆ ಪ್ರಹಾರ ನಡೆಸಿದ್ದಾರೆ. ನಾಲ್ಕು ಟಿವಿ ಚಾನೆಲ್ಗಳ ಪ್ರಸಾರಕ್ಕೆ ತಡೆ ಹೇರಿದ್ದಾರೆ. ಟಿವಿ9, ಎನ್ ಟಿವಿ, ಟೆನ್ ಟಿವಿ ಮತ್ತು ಸಾಕ್ಷಿ ಟಿವಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಹೇಳಲಾಗಿದೆ.
ಕೇಬಲ್ ಟಿವಿ ಆಪರೇಟರ್ ಗಳು ಈ ಟಿವಿ ಚಾನೆಲ್ಗಳ ಪ್ರಸಾರವನ್ನು ತಡೆ ಹಿಡಿದಿದ್ದಾರೆ. ಈ ಬಗ್ಗೆ ರಾಜ್ಯಸಭಾ ಸದಸ್ಯ ಎಸ್ ನಿರಂಜನ್ ರೆಡ್ಡಿ ಟ್ರಾಾಯಿಗೆ ದೂರು ನೀಡಿದ್ದಾರೆ. ಚಂದ್ರ ಬಾಬು ನಾಯ್ಡು ಸರಕಾರದ ಒತ್ತಡದ ಮೇರೆಗೆ ಕೇಬಲ್ ಆಪರೇಟರ್ಸ್ ಗಳು ಈ ನಾಲ್ಕು ಚಾನೆಲ್ಗಳ ಪ್ರಸಾರವನ್ನು ತಡೆಹಿಡಿದಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ಕುಟುಂಬದೊಂದಿಗೆ ಸಾಕ್ಷಿ ಚಾನಲ್ ಗೆ ಸಂಬಂಧ ಇದೆ. ಈ ನಾಲ್ಕು ಚಾನೆಲ್ಗಳು ಜಗನ್ ಮೋಹನ್ ರೆಡ್ಡಿ ಅವರ ಪರ ಇದೆ ಎಂಬ ಭಾವನೆ ಇದೆ.