ಕ್ಯಾನ್ಸರ್ ಪೀಡಿತ ತಾಯಿಯನ್ನು ಕೊಲ್ಲಲು ಯತ್ನಿಸಿದ ಮಗ

0
420

ಸನ್ಮಾರ್ಗ ವಾರ್ತೆ

ಕೇರಳ: ಮಕ್ಕಳು ಕಷ್ಟ ಕಾಲಕ್ಕಾಗಬೇಕು. ಆದರೆ ಕೆಲವೊಮ್ಮೆ ದುಷ್ಟ ಮಕ್ಕಳು ಹುಟ್ಟಿಕೊಳ್ಳುತ್ತಾರೆ. ಕೇರಳದ ಚೆರುಪುಝ ಬುದಾನ ಎಂಬಲ್ಲಿ ಸತೀಶನ್ ಎಂಬಾತ ತನ್ನ ಕ್ಯಾನ್ಸರ್ ರೋಗಿ ತಾಯಿಯನ್ನು ಉಪಚರಿಸುವುದು ಬಿಟ್ಟುಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ.

ತಾಯಿಯ ಉಪಚಾರಕ್ಕೆ ತನ್ನಲ್ಲಿ ಹಣ ಇಲ್ಲ ಆದ್ದರಿಂದ ಅನಿವಾರ್ಯವಾಗಿ ಹೀಗೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಎಷ್ಟೇ ಬಡತನವಿದ್ದರು ತಾಯಿ ಭಾರವಾಗುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಗಂಭೀರವಾಗಿ ಗಾಯಗೊಂಡ ನಾರಾಯಣಿಯವರನ್ನು ಕಲ್ಲಿಕೋಟೆಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕಿತ್ಸೆಯ ವೇಳೆ ನಾರಾಯಣಿ ಅವರು ವೈದ್ಯರಲ್ಲಿ ಮಗನ ಕ್ರೂರ ಕೃತ್ಯವನ್ನು ಹೇಳಿದ್ದರಿಂದ ಘಟನೆ ಬೆಳಕಿಗೆ ಬಂತು.

ವೈದ್ಯರು ಪೊಲೀಸರಿಗೆ ದೂರು ನೀಡಿದ್ದು ಮಗ ಸತೀಶನ್‍ನನ್ನು ಚುರುಪುಝ ಪೊಲೀಸರು ಬಂಧಿಸಿದ್ದಾರೆ. ಸತೀಶನ್ ಮದ್ಯದ ಅಮಲಿನಲ್ಲಿ ಕೊಲೆ ಮಾಡಲು ಯತ್ನಿಸಿದನೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.