ರಾಜೀನಾಮೆ ಇಲ್ಲ: ಸಿಬಿಐ ತನಿಖೆ ಇಲ್ಲ – ಸಿದ್ದರಾಮಯ್ಯ

0
189

ಸನ್ಮಾರ್ಗ ವಾರ್ತೆ

ಬೆಂಗಳೂರು, ಜು. 5: ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಮೂಡಕ್ಕೆ ಸಂಬಂದಿಸಿ ಪ್ರತಿಪಕ್ಷದ ಆರೋಪವನ್ನು ನಿರಾಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ತಾನು ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯ ಮಂತ್ರಿ ಹೇಳಿದ್ದು, ತನ್ನ ವಿರುದ್ಧ ಪ್ರತಿಪಕ್ಷದ ಆರೋಪ ರಾಜಕೀಯ ಪ್ರೇರಿತವಾಗಿದ್ದು ತಾನು ಮುಖ್ಯಮಂತ್ರಿಯಾಗಿದಕ್ಕೆ ತನ್ನ ಪತ್ನಿ ಅವರ ಜಮೀನು ಕೈ ಬಿಡಬೇಕೆ ಎಂದು ಸಿದ್ದರಾಮಯ್ಯ ಕೇಳಿದರು.

ಮುಖ್ಯಮಂತ್ರಿಯ ಪತ್ನಿ ಪಾರ್ವತಿಯವರ ಹೆಸರಿನ ನಾಲ್ಕು ಕಾಲು ಎಕರೆ ಜಮೀನು ಕ್ರಮಬದ್ದವಾಗಿಲ್ಲ ಮತ್ತು ಅದಕ್ಕೆ ಬದಲಾಗಿ ಮೈಸೂರಿನ ಅರ್ಬನ್ ಡೆವಲಪ್ ಮೆಂಟ್ ಅಥಾರಿಟಿಯ ಮೂಡದ ಅಧೀನದ ಪ್ರಮುಖ ಫ್ಲಾಟ್ ಕೊಡಲಾಗಿದೆ ಎಂದು ಪ್ರತಿಪಕ್ಷ ಆರೋಪಿಸುತ್ತಿದೆ.

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಜ್ಯ ಸಮಿತಿ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳ ವಸತಿಗೆ ಬಿಜೆಪಿ ಮಾರ್ಚ್ ಮಾಡಿತ್ತು. ಗುರುವಾರ ಮೈಸೂರಿನ ಬಿಜೆಪಿ ನೇತೃತ್ವದಲ್ಲಿ ಮೂಡ ಕಚೇರಿಗೆ ಮಾರ್ಚ್ ನಡೆಸಿದೆ. ಈ ವೇಳೆ ಕಚೇರಿಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.