ವಂದೇ ಭಾರತ್ ರೈಲಿನ ಕಿಟಕಿ ಒಡೆದು ಹಾಕಿದ ಜಿಹಾದಿ: ಬಲಪಂಥೀಯ ಗ್ರಾಹಕರ ಪ್ರಚಾರದ ಅಸಲಿಯತ್ತೇನು?

0
442

ಸನ್ಮಾರ್ಗ ವಾರ್ತೆ

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಕಿಟಕಿಯನ್ನು ವ್ಯಕ್ತಿಯೊರ್ವ ಒಡೆಯುತ್ತಿರುವ ಒಂದು ವಿಡಿಯೋವನ್ನು ನೀವು ನೋಡಿರಬಹುದು. ಭಾರತೀಯ ರೈಲ್ವೆಯ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಜಿಹಾದಿ ಪ್ರಯತ್ನ ಮಾಡ್ತಾ ಇದ್ದಾನೆ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಬಲಪಂಥೀಯ ಸೋಶಿಯಲ್ ಮೀಡಿಯಾ ಗ್ರಾಹಕರು ಈ ರೀತಿಯ ಒಕ್ಕಣೆ ಬರೆದು ಧಾರಾಳವಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಇದೀಗ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೇ ಆ ವಿಡಿಯೋದ ಅಸಲಿಯತ್ತು ಏನು ಎಂದು ಹೇಳಿದ್ದಾರೆ.

ಈ ಬಗ್ಗೆ ರೈಲ್ವೆಯ ಸೀನಿಯರ್ ಸೆಕ್ಷನ್ ನ ಇಂಜಿನಿಯರ್ ಆಗಿರುವ ಮಂದಿರ ಮೂರ್ತಿಯವರು ಸೋಶಿಯಲ್ ಮೀಡಿಯಾದಲ್ಲಿ ಕ್ಲಾರಿಫಿಕೇಶನ್ ನೀಡಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ನ ಗಾಜಿಗೆ ಈ ಮೊದಲೇ ಹಾನಿಯಾಗಿತ್ತು. ಆ ಗಾಜನ್ನು ಒಡೆದು ಹೊಸ ಗಾಜನ್ನು ಅಲ್ಲಿಗೆ ಫಿಕ್ಸ್ ಮಾಡುವುದಕ್ಕಾಗಿ ಹಳೆ ಗಾಜನ್ನು ಒಡೆಯಲಾಗಿತ್ತು ಎಂದವರು ಸ್ಪಷ್ಟೀಕರಣ ನೀಡಿದ್ದಾರೆ.

ಸಾರ್ವಜನಿಕರು ಸೇರದ ದೂರದ ಸ್ಥಳದಲ್ಲಿ ಈ ಗಾಜು ಒಡೆಯುವ ಕೆಲಸವನ್ನು ಮಾಡಲಾಗಿದೆ ಎಂದು ಕೂಡ ಅವರು ವಿವರಿಸಿದ್ದಾರೆ. ಫ್ಯಾಕ್ಟ್ ಚೆಕ್ ಮಾಡುವಲ್ಲಿ ನಿಪುಣವಾಗಿರುವ ಮೊಹಮ್ಮದ್ ಝುಬೇರ್ X/@zoo_bear ಕೂಡ ಈ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ.