ಕಲಬುರ್ಗಿಯಲ್ಲಿ “ವೆಲ್ಫೇರ್ ಯುವ ಕರ್ನಾಟಕ” ಉದ್ಘಾಟನೆ

0
180

ಸನ್ಮಾರ್ಗ ವಾರ್ತೆ

ಕಲಬುರ್ಗಿ: ಸೆಪ್ಟೆಂಬರ್ 08ರಂದು ಕಲಬುರಗಿ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಯುವ ಸಂಘಟನೆ “ವೆಲ್ಫೇರ್ ಯುವ ಕರ್ನಾಟಕ” ಇದರ ಉದ್ಘಾಟನೆ ಸಂಭ್ರಮದಿಂದ ನೆರವೇರಿದ್ದು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಯುವಕರು ಪಾಲ್ಗೊಂಡಿದ್ದರು.

ಸಮ್ಮೇಳನ ಸಭಾಂಗಣಕ್ಕೆ ಜಾಥಾವನ್ನು ಸಂಘಟಿಸಲಾಗಿತ್ತು, ಯುವಕರು ಅತೀ ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತ ಸಭಾಂಗಣಕ್ಕೆ ತಲುಪಿದರು. ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೆರ್ ಹುಸೇನ್ ರವರು ಸಮಾವೇಶವನ್ನು ಉದ್ಘಾಟಿಸಿ ಧ್ವಜವನ್ನು ವೆಲ್ಫೇರ್ ಯುವ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮುಹಮ್ಮದ್ ರಫೀಕ್ ಅವರಿಗೆ ಹಸ್ತಾಂತರಿಸಿದರು.

ಸಮಾವೇಶದಲ್ಲಿ ಉತ್ತರ ಕರ್ನಾಟಕದ ನೂರಾರು ಯುವಕರು ಭಾಗವಹಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಖುರೇಶಿ ಉದ್ಘಾಟನ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ನಗರದ ಇಬ್ಬರು ಸಾಧಕರಿಗೆ ವೆಲ್ಫೇರ್ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೆಲ್ಪೇರ್ ಯುವ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಅಹಮದ್, ತಲತ್ ಯಾಸ್ಮೀನ್, ಮುಬೀನ್ ಅಹ್ಮದ್, ಆಸಿಫ್ ಬಿಳಿಕುದ್ರಿ, ಸಿ.ಎಚ್.ಸಲಾಮ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾ ಖಾನ್ ಅವರ ಸಮಾರೋಪ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪಕ್ಷದ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಅಫ್ಝಲ್ ಹುಸೇನ್ ಹುಮನಾಬಾದ ಕಾರ್ಯಕ್ರಮ ನಿರೂಪಿಸಿದರು.