ಸನ್ಮಾರ್ಗ ವಾರ್ತೆ
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಾರಿ ಸೋಲಾಗುವ ಸೂಚನೆಗಳು ಲಭ್ಯವಾಗತೊಡಗಿವೆ. ಮುಂಬೈ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯು ಭಾರಿ ಮುಖಭಂಗಕ್ಕೆ ಒಳಗಾಗಿದ್ದು ಉದ್ದವ್ ಠಾಕ್ರೆ ಬಣದ ಯುವಸೇನೆಗೆ ಭಾರಿ ಗೆಲುವಾಗಿದೆ.
ಆದಿತ್ಯ ಠಾಕ್ರೆ ನೇತೃತ್ವ ನೀಡುವ ಶಿವಸೇನೆಯ ವಿದ್ಯಾರ್ಥಿ ವಿಭಾಗವಾದ ಯುವಸೇನಾ ಹತ್ತು ಸೀಟುಗಳಲ್ಲಿ ಹತ್ತನ್ನು ಗೆದ್ದುಕೊಂಡಿದೆ. ಈ ಗೆಲುವು ಶಿವಸೇನೆ ಸಹಿತ ಅಗಾಡಿ ಒಕ್ಕೂಟದ ಪಾಲಿಗೆ ಭಾರಿ ಧೈರ್ಯವನ್ನು ತುಂಬಿದಂತಾಗಿದೆ.
ನಮ್ಮಿಂದ ತಪ್ಪುಗಳು ನಡೆದಿದೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ನಡೆಸಿ ತಿದ್ದಿಕೊಳ್ಳುತ್ತೇವೆ ಎಂದು ಎಬಿವಿಪಿ ನಾಯಕರು ಹೇಳಿದ್ದಾರೆ.
ಮಹಾರಾಷ್ಟ್ರದ ಶಿಂದೆ ಸರಕಾರ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಕಳಕೊಳ್ಳುತ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ ಎಂದು ಹೇಳಲಾಗುತ್ತಿದೆ.