ಪ್ರವಾದಿ ಮುಹಮ್ಮದರ ಪ್ರತಿಕೃತಿ ದಹಿಸಲು ಕರೆ: ಯತಿ ನರಸಿಂಗಾನಂದ ವಿರುದ್ಧ ಎಫ್ಐಆರ್ ದಾಖಲು

0
119

ಸನ್ಮಾರ್ಗ ವಾರ್ತೆ

ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ದಸ್ನಾದೇವಿ ಮಂದಿರದ ಪ್ರಧಾನ ಪುರೋಹಿತ ಯತಿ ನರಸಿಂಹಾನಂದ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಕೇಸು ದಾಖಲಿಸಿದ್ದಾರೆ.

ಸೆಪ್ಟೆಂಬರ್ 29ರಂದು ಗಾಜಿಯಾಬಾದ್ ನ ಹಿಂದಿ ಭವನ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಪ್ರವಾದಿ ಮುಹಮ್ಮದರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.

ದಸರಾದಲ್ಲಿ ಪ್ರತಿಕೃತಿ ದಹಿಸುವುದಾದರೆ ನೀವು ಮುಹಮ್ಮದರ ಪ್ರತಿಕೃತಿಯನ್ನು ದಹಿಸಬೇಕು ಎಂದು ನರಸಿಂಗಾನಂದ ಹೇಳಿದ್ದಾರೆ. ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ನರಸಿಂಗಾನಂದ ಅವರನ್ನು ಅರೆಸ್ಟ್ ಮಾಡಬೇಕು ಎಂದು ಸಾರ್ವಜನಿಕರಿಂದ ಬಲವಾದ ಒತ್ತಡ ಕೇಳಿ ಬಂದಿದೆ.

ಅರೆಸ್ಟ್ ನರಸಿಂಗಾನಂದ್ ಎಂಬ ಹಾಶ್ ಟಾಗ್ ಎಕ್ಸ್ ನಲ್ಲಿ ಕಾಣಿಸಿಕೊಂಡಿದೆ. 1 ಲಕ್ಷಕ್ಕಿಂತಲೂ ಅಧಿಕ ಮಂದಿ ಈ ಹಾಸ್ಟಾಗ್ ಅನ್ನು ಉಪಯೋಗಿಸಿ ಪ್ರತಿಕ್ರಿಯಿಸಿದ್ದಾರೆ. ಧರ್ಮ ದ್ವೇಷವನ್ನು ಪ್ರಚೋದನೆಗೊಳಿಸಿದ 302ನೇ ಸೆಕ್ಷನ್ ಅಡಿಯಲ್ಲಿ ಇದೀಗ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನರಸಿಂಗಾನಂದ ಅವರ ಭಾಷಣ ಅತ್ಯಂತ ಪ್ರಚೋದನಕಾರಿಯಾಗಿದೆ ಮತ್ತು ಅವರನ್ನು ತಕ್ಷಣ ಬಂದಿಸಬೇಕು ಎಂದು ಕೋರಿ ಜಮೀಯತೆ ಉಲಮಾಯೆ ಹಿಂದ್ ನ ಅಧ್ಯಕ್ಷ ಮೌಲಾನ ಮಹಮೂದ್ ಮದನಿ ಅವರು ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.