ಬಲಿಯ, ಜು. 30: ಉತ್ತರ ಪ್ರದೇಶದಲ್ಲಿ ಗುಂಪು ದಾಳಿ ನಡೆದಿದ್ದು ಬಲಿಯ ಜಿಲ್ಲೆಯ ನಿಯಿನಿ ಗ್ರಾಮದಲ್ಲಿ ದಲಿತ ವ್ಯಾಪಾರಿಯೊಬ್ಬರನ್ನು ನಾಲ್ವರ ತಂಡ ಹೊಡೆದು ದಾರುಣವಾಗಿ ಕೊಲೆ ಮಾಡಿದೆ. ದೀಹ್ ಬಾಬ ಎಂಬಲ್ಲಿ ವ್ಯಾಪಾರ ಮಾಡುತ್ತಿದ್ದ ಶೋಭ್ನಾಥ್ ಪಾಸ್ವಾನ್(30) ಎಂಬವರು ತಂಡದಿಂದ ಹಲ್ಲೆಗೊಳಗಾಗಿ ಮೃತಪಟ್ಟ ನತದೃಷ್ಟನಾಗಿದ್ದು ಇವರ ಅಂಗಡಿಯಿಂದ ಸಾಮಾನು ಖರೀದಿಸಲು ಬಂದ ಗಿರಾಕಿಗಳೇ ಕೊಲೆ ಮಾಡಿದ್ದಾರೆ.
ಪಾಸ್ವಾನ್ರ ಅಂಗಡಿಗೆ ಬಂದು ಅಮಿತ್ ಸಿಂಗ್ ಮತ್ತು ಆತನ ಗೆಳೆಯರು ಕೆಲವು ಸಾಮಾನುಗಳನ್ನು ಕೊಡುವಂತೆ ಕೇಳಿದ್ದಾರೆ. ಸಾಮಾನಿನ ಹಣ ಕೇಳಿದಾಗ ಜಗಳಕ್ಕೆ ನಿಂತ ಅಮಿತ್ ಸಿಂಗ್ ಮತ್ತು ಆತನ ಗೆಳೆಯ ಪಾಸ್ವಾನ್ಗೆ ಹೊಡೆದರು. ಸ್ವಲ್ಪ ಸಮಯ ಕಳೆದ ನಂತರ ಆತ ಕೆಲವರನ್ನು ಸೇರಿಸಿಕೊಂಡು ಮರಳಿ ಬಂದ ಪುನಃ ಪಾಸ್ವಾನ್ರನ್ನು ಎಲ್ಲರೂ ಮಾರಣಾಂತಿಕವಾಗಿ ಹೊಡೆದರು. ತತ್ಪರಿಣಾಮವಾಗಿ ಗಂಭೀರ ಗಾಯಗೊಂಡ ಶೋಭನಾಥ್ ಪಾಸ್ವಾನ್ರನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕಿ ಉಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಮಿತ್ ಮತ್ತು ಆತನ ಜೊತೆಗಿದ್ದವರ ಬಂಧನಕ್ಕೆ ತಲಾಶ್ ನಡೆಸುತ್ತಿದ್ದಾರೆ.