ಉನ್ನಾವ ಅಪಘಾತ: ಬಾಲಕಿಯ ಪರಿಸ್ಥಿತಿ ಗಂಭೀರ, ಬಿಜೆಪಿ ಶಾಸಕನ ವಿರುದ್ಧ ಕೊಲೆ ಕೇಸು ದಾಖಲು

0
656

ಲಕ್ನೊ, ಜು. 31: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಉತ್ತರ ಪ್ರದೇಶದ ಉನ್ನಾವ ಅತ್ಯಾಚಾರ ಪ್ರಕರಣದ ಪೀಡಿತ ಬಾಲಕಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಯ ಶ್ವಾಸಕೋಶದಲ್ಲಿ ರಕ್ತಸ್ರಾವ ಆಗಿದೆ. ಎದೆಗೂಡು ಒಡೆದಿದೆ. ಕಾಲಿನ ಎಲುಬುಗಳು ಹಲವು ಕಡೆ ಮುರಿದಹೋಗಿದೆ. ರಕ್ತದೊತ್ತಡ ವ್ಯತ್ಯಾಸವಾಗುತ್ತಾ ಮುಂದುವರಿದಿದೆ. ವೆಂಟಿಲೇಟರ್ ಇಲ್ಲದೆ ಬಾಲಕಿಗೆ ಉಸಿರಾಡಲು ಕಷ್ಟವಾಗುತ್ತಿದೆ.

ಅಪಘಾತದಲ್ಲಿ ಬಾಲಕಿಯ ವಕೀಲರಿಗೂ ಗಂಭೀರ ಗಾಯಗಳಾಗಿತ್ತು. ರವಿವಾರ ಮಧ್ಯಾಹ್ನ ಅಪಘಾತದಲ್ಲಿ ಬಾಲಕಿ ತಾಯಿಯ ಸಹೋದರಿ ಮತ್ತು ಸಹೋದರ ಮೃತಪಟ್ಟಿದ್ದರು. ಇದೇ ವೇಳೆ ಘಟನೆಯ ತನಿಖೆಗೆ ಉತ್ತರಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಸಿಬಿಐ ಪ್ರಕರಣವನ್ನು ವಹಿಸಿಕೊಳ್ಳುವವರೆಗೆ ಘಟನೆಯ ಎಲ್ಲ ಪಾರ್ಶ್ವಗಳನ್ನು ಪೊಲೀಸರು ತನಿಖೆ ಮಾಡಲಿದ್ದಾರೆ. ಅತ್ಯಾಚಾರ ಆರೋಪಿ ಬಿಜೆಪಿ ಶಾಸಕ ಕುಲ್ದಿಫ್ ಸೇಂಗರ್ ಮತ್ತು ಸಹೋದರ ಸಹಿತ ಹತ್ತು ಮಂದಿಯ ವಿರುದ್ಧ ಕೊಲೆಯತ್ನ, ಕೊಲೆ, ಸಂಚು ಆರೋಪಗಳನ್ನು ಹೊರಿಸಿ ರಾಯ್‍ಬರೇಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.