ಮುಂಬೈ, ಜು. 31: ಸಿದ್ಧಾರ್ಥರ ಆತ್ಮಹತ್ಯೆ ಕುರಿತು ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಪ್ರತಿಕ್ರಿಯೆ ನೀಡಿದ್ದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೇ ಉದ್ಯಮಿಗಳಿಗೆ ಅವರು ಸಲಹೆಯನ್ನೂ ನೀಡಿದ್ದಾರೆ.
ನನಗೆ ಸಿದ್ಧಾರ್ಥರ ವೈಯಕ್ತಿಕ ಪರಿಚಯವಿಲ್ಲ. ಅವರ ಆರ್ಥಿಕ ಸ್ಥಿತಿಯ ಕುರಿತು ಗೊತ್ತಿಲ್ಲ. ಆದರೂ ಬಿಸಿನೆಸ್ ಮುಗ್ಗರಿಸಿದ ಹೆಸರಿನಲ್ಲಿ ಯಾರೂ ಸ್ವಂತ ಆತ್ಮಾಭಿಮಾನವನ್ನು ನಾಶಪಡಿಸಬೇಡಿ. ಅದು ಉದ್ಯಮದ ನಾಶಕ್ಕೆ ಕಾರಣವಾಗಬಹುದು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ಮಂಗಳೂರಿನ ನೇತ್ರಾವತಿ ನದಿಯ ಸಮೀಪ ಕಾಣೆಯಾಗಿದ್ದ ಕೆಫೆ ಕಾಫಿ ಡೆ ಉದ್ಯಮದ ಸಂಸ್ಥಾಪಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರ ಅಳಿಯ ವಿಜಿ ಸಿದ್ಧಾರ್ಥರ ಮೃತದೇಹ ಗುರುವಾರ ಬೆಳಿಗ್ಗೆ ಮಂಗಳೂರಿನ ಹೊಯ್ಗೆ ಬಝಾರ್ ಬಳಿ ಕಂಡು ಬಂದಿತ್ತು.