ಉನ್ನಾವ ಶಾಸಕ ಕುಲ್‍ದೀಪ್ ಸಿಂಗ್ ಸೇಂಗರ್ ಬಿಜೆಪಿಯಿಂದ ಉಚ್ಚಾಟನೆ

0
656

ಹೊಸದಿಲ್ಲಿ, ಆ. 1: ಉನ್ನಾವ ಅತ್ಯಾಚಾರ ಪ್ರಕರಣದ ಆರೋಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರನನ್ನು ಬಿಜೆಪಿಯಿಂದ ಹೊರಹಾಕಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾದ ಬಾಲಕಿ ಮತ್ತು ಕುಟುಂಬವು ವಾಹನ ಅಪಘಾತದಲ್ಲಿ ಸಿಲುಕಿದ ಘಟನೆಯಲ್ಲಿ ಶಾಸಕ ಶಾಮಿಲಾಗಿದ್ದಾರೆ ಎಂಬ ಆರೋಪ ಬಲವಾಗಿದ್ದರಿಂದ ಪಾರ್ಟಿ ಅವರ ವಿರುದ್ಧ ಕ್ರಮಕೈಗೊಂಡಿದೆ.

ಅತ್ಯಾಚಾರ ಪ್ರಕರಣದಲ್ಲಿ ಸೇಂಗರ್ ಈಗ ಜೈಲಿನೊಳಗಿದ್ದಾರೆ. ಅವರ ವಿರುದ್ಧ ಕೊಲೆಯತ್ನ ಆರೋಪ ಹೊರಿಸಿ ಕೇಸು ದಾಖಲಿಸಿಕೊಳ್ಳಲಾಗಿದೆ. ಘಟನೆಯ ತನಿಖೆಯನ್ನು ಸಿಬಿಐ ನಡೆಸಲಿದೆ.

ಅತ್ಯಾಚಾರ ಪ್ರಕರಣದಲ್ಲಿ ಕುಲ್‍ದೀಪ್ ಸಿಂಗ್ ಸೇಂಗರ್ ಜೈಲಿನೊಳಗಿದ್ದು ಈತನ ವಿರುದ್ಧ ಕ್ರಮ ಜರಗಿಸಿದ್ದರಿಂದ ಬಿಜೆಪಿಯ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಕುಲ್ದೀಪ್ ಸಿಂಗ್ ನನ್ನು ಪಾರ್ಟಿ ಹೊರಹಾಕಿದೆ ಎಂದು ಎಂದು ಹೇಳಲಾಗಿದ್ದರೂ ಅಧಿಕೃತ ಸೂಚನೆಯನ್ನು ಬಿಜೆಪಿ ಹೊರಡಿಸಿರಲಿಲ್ಲ. ಉತ್ತರ ಪ್ರದೇಶದಿಂದ ನಾಲ್ಕು ಬಾರಿ ಈತ ಶಾಸಕನಾಗಿ ಆಯ್ಕೆಯಾಗಿದ್ದರು.