ನಾಳೆ (ಸೆ.22) ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ವತಿಯಿಂದ ಬೃಹತ್ ರಕ್ತದಾನ ಶಿಬಿರ

0
68

ಸನ್ಮಾರ್ಗ ವಾರ್ತೆ

ಮಂಗಳೂರು: ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ, ಇಂಡಿಯನ್ ರೆಡ್ ಕ್ರಾಸ್ ಹಾಗೂ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ರಕ್ತದಾನ ಶಿಬಿರವು ಸೆಪ್ಟೆಂಬರ್ 22 ರವಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕುದ್ರೋಳಿಯ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ
ಯು.ಟಿ. ಖಾದರ್, ಐವನ್ ಡಿಸೋಜಾ, ಪದ್ಮರಾಜ್ ರಾಮಯ್ಯ, ಇನಾಯತ್ ಅಲಿ, ಲಕ್ಷ್ಮಣ್ ಕುಂದರ್, ಸುನೀಲ್ ಕುಮಾರ್ ಬಜಿಲಿಕೆರೆ, ಅಶೋಕ್ ಕುಮಾರ್, ಜಗದೀಶ್ ಎಂ ಶೆಟ್ಟಿ, ಮಂಜುಳಾ ನಾಯಕ್, ಮುನೀರ್ ಕಾಟಿಪಳ್ಳ, ಪ್ರತಾಪ್ ಸಿಂಗ್ ತೋರಾಟ್, ಹಾಜಿ ಕೆ.ಎಸ್ ಮಸೂದ್, ಶಂಶುದ್ದೀನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಈ ರಕ್ತದಾನ ಶಿಬಿರದಲ್ಲಿ ಎಲ್ಲಾ ಜಾತಿ ಧರ್ಮ ಸಮುದಾಯಗಳ ಜನರು, ಎಲ್ಲಾ ವಯೋಮಾನದವರು, ಸ್ತ್ರೀ ಮತ್ತು ಪುರುಷರು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೊಳಿಸುವಂತೆ ಸಂಯೋಜಕರು ಮನವಿ ಮಾಡಿದ್ದಾರೆ.