ಸಂಗೀತ ಭಾರತಿ ಸೇವಾ ಸಂಸ್ಥೆಯಿಂದ ಜಮಾಅತೆ ಇಸ್ಲಾಮೀ ಹಿಂದ್ ಗೆ ‘ಆದಿಗುರು ಶ್ರೀಶಂಕರ ಅನುಗ್ರಹ ರಾಜ್ಯ ಪ್ರಶಸ್ತಿ’

0
178

ಸನ್ಮಾರ್ಗ ವಾರ್ತೆ

ಬಳ್ಳಾರಿ: ಆದರ್ಶ ಸಮಾಜದ ನಿರ್ಮಾಣ, ಶಾಂತಿ ಮತ್ತು ಸೌಹಾರ್ದತೆಗಾಗಿ ಸರ್ವಧರ್ಮೀಯರನ್ನು ಒಗ್ಗೂಡಿಸಿ ಭಾಂದವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸಪೇಟೆಯ ಜಮಾಅತೆ ಇಸ್ಲಾಮೀ ಹಿಂದ್ ನಿರಂತರ ಶ್ರಮಿಸುತ್ತಾ ಬಂದಿದೆ.

ಇದನ್ನು ಗುರುತಿಸಿ ಹೊಸಪೇಟೆಯ ಸಂಗೀತ ಭಾರತಿ ಸಾಮಾಜಿಕ ಸೇವಾ ಸಂಸ್ಥೆಯ ವತಿಯಿಂದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯನ್ನು 2024-25 ಸಾಲಿನ ‘ಆದಿಗುರು ಶ್ರೀಶಂಕರ ಅನುಗ್ರಹ ರಾಜ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿಯನ್ನು ಜಮಾಅತೆ ಇಸ್ಲಾಮೀ ಹಿಂದ್ ಹೊಸಪೇಟೆ ಅಧ್ಯಕ್ಷರಾದ ಮುಹಮ್ಮದ್ ಅಝೀಝ್ ಮುಲ್ಲಾ ಸ್ವೀಕರಿಸಿದರು.