ಸನ್ಮಾರ್ಗ ವಾರ್ತೆ
ಅಮರಾವತಿ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಯುವಕನಿಗೆ ಹಲ್ಲೆ ಮಾಡಿ ಮೂತ್ರ ಕುಡಿಸಲು ಯತ್ನಿಸಿದ ಘಟನೆ ನಡೆದಿದೆ.
ಭಗವಾನ್ ರಾಮ್ ಎಂಬ ವ್ಯಕ್ತಿಗೆ ಜೂನ್ ಹದಿನಾಲ್ಕರಂದು ಇಬ್ಬರು ಯುವಕರು ಬಾಟ್ಲಿಯಲ್ಲಿ ತಂದ ಮೂತ್ರ ಕುಡಿಯುವಂತೆ ಬಲವಂತಪಡಿಸಿ ಹೊಡೆದಿದ್ದಾರೆ.
ಭಗವಾನ್ ರಾಂರ ರಾಜಸ್ತಾನದ ಇಬ್ಬರು ಮಿತ್ರರು ವಿಶಾಖ ಪಟ್ಟಣಕ್ಕೆ ಬಂದಿದ್ದರು. ಇಲ್ಲಿ ಅವರು ಬಿಸಿನೆಸ್ ಮಾಡುತ್ತಿದ್ದಾರೆ. ಮೂವರು ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮದ್ಯಪಾನ ಮಾಡಿದ್ದಾರೆ. ನಂತರ ಭಗವಾನ್ ರಾಂ ತಮ್ಮ ಪತ್ನಿಯರಿಗೆ ಅಶ್ಲೀಲ ಮೆಸೇಜು ಕಳುಹಿಸಿದ್ದಾರೆ ಎಂದು ಆರೋಪಿಸಿ ಹೊಡೆದು ಮೂತ್ರ ಕುಡಿಯುವಂತೆ ಮಾಡಲು ಯತ್ನಿಸಿದ್ದಾರೆ.
ಇದೇ ವೇಳೆ ಹೊಡೆಯುವ ಮತ್ತು ಮೂತ್ರ ಕುಡಿಸಲು ಯತ್ನಿಸುವ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರಿಸಿದ್ದಾರೆ. ಮಾತ್ರವಲ್ಲ ಘಟನೆಯ ಬಗ್ಗೆ ಯಾರಲ್ಲಾದರೂ ಹೇಳಿದರೆ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಹೊಡೆದು ನಂತರ ಭಗವಾನ್ ರಾಮ್ರನ್ನು ಆರೋಪಿಗಳು ನಿರ್ಜನ ಪ್ರದೇಶದಲ್ಲಿ ದೂಡಿ ಹಾಕಿ ಹೋಗಿದ್ದಾರೆ. ಮನೆಗೆ ಮರಳಿದ ರಾಂ ಮೊದಲು ದೂರು ನೀಡಲು ಮುಂದಾಗಲಿಲ್ಲ. ಆದರೆ, ಒಂದು ದಿನ ಕಳೆದ ಮೇಲೆ ಆರೋಪಿಗಳು ಹೊಡೆಯುವ ದೃಶ್ಯ ಪ್ರಚಾರವಾಯಿತು. ಆ ಮೇಲೆ ಭಗವಾನ್ ರಾಂ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಭೂಗತರಾಗಿದ್ದು ಇವರನ್ನು ಹುಡುಕು ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದರು.