ಉನ್ನಾವ್ ಅತ್ಯಾಚಾರ ಪ್ರಕರಣ: ಅತ್ಯಾಚಾರಿ ಆರೋಪಿ ಕುಲ್ದೀಪ್ ಸಿಂಗ್ ಸೇಂಗರ್ ನನ್ನು ಬೆಂಬಲಿಸಿದ ಬಿಜೆಪಿ ಶಾಸಕ

0
744

ಉನ್ನಾವ, ಆ. 3: ಉನ್ನಾವ ಕೊಲೆ ಪ್ರಕರಣದ ಆರೋಪಿ ಕುಲ್ದೀಪ್ ಸಿಂಗ್ ಸೇಂಗರ್ ನನ್ನು ಬಿಜೆಪಿ ಶಾಸಕ ಆಶೀಷ್ ಸಿಂಗ್ ಅಸು ಬೆಂಬಲಿಸಿದ್ದಾರೆ. ಕುಲ್ದೀಪ್ ಕೆಟ್ಟ ಸಮಯದಲ್ಲಿ ಹಾದು ಹೋಗುತ್ತಿದ್ದು ಆದಷ್ಟು ಬೇಗನೆ ಅವರು ಇದರಿಂದ ಹೊರಬರುತ್ತಾರೆ ಎನ್ನುವ ನಿರೀಕ್ಷೆ ತನಗಿದೆ ಎಂದು ಅವರು ಹೇಳಿದರು. ಅಸು ಹರ್ದೋಯಿಯ ಶಾಸಕರಾಗಿದ್ದಾರೆ.

ನಮ್ಮ ಸಹೋದರ ಕುಲ್ದೀಪ್ ಸಿಂಗ್ ಸೇಂಗರ್ ಇಂದು ನಮ್ಮ ಜೊತೆಯಿಲ್ಲ. ಅವರು ಕೆಟ್ಟ ಸಮಯದಲ್ಲಿ ಹಾದು ಹೋಗುತ್ತಿದ್ದಾರೆ. ಇದರಿಂದ ಅವರು ಮುಕ್ತರಾಗುತ್ತಾರೆ ಎಂದು ನಾವು ಹಾರೈಸಬಹುದಾಗಿದೆ ಎಂದು ಅಸು ಹೇಳಿದರು. ಉನ್ನಾವದ ಬಳಿ ನಡೆದ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಈ ವಿವಾದಿತ ಹೇಳಿಕೆ ನೀಡಿದ್ದಾರೆ.

ಉನ್ನಾವ ಅತ್ಯಾಚಾರ ಪ್ರಕರಣದ ಆರೋಪಿ ಕುಲ್ದೀಪ್ ಸಿಂಗ್‍ ಸೇಂಗರ್ ನನ್ನ ಗುರುವಾರ ಬಿಜೆಪಿಯಿಂದ ಉಚ್ಚಾಟಿಸಲಾಗಿದ್ದು ಉನ್ನಾವ ಬಾಲಕಿ ಸಂಚರಿಸಿದ ಕಾರು ಅಪಘಾತ ಮಾಡಿಸಿದ ಆರೋಪವನ್ನು ಕೂಡ ಸೇಂಗರ್ ವಿರುದ್ಧ ಹೊರಿಸಲಾಗಿದೆ. ನಂತರ ಅವರನ್ನು ಪಕ್ಷದಿಂದ ಬಿಜೆಪಿ ಉಚ್ಚಾಟಿಸಿದೆ.