ಜೈಪುರ, ಆ. 2: ಪಾರ್ಟಿಯ ಟಿಕೆಟಿನಲ್ಲಿ ಸ್ಪರ್ಧಿಸುವುದಕ್ಕೆ ಬಿಎಸ್ಪಿ ಹಣ ಕೇಳುತ್ತಿದೆ ಎಂದು ರಾಜಸ್ಥಾನದ ಬಿಎಸ್ಪಿ ಶಾಸಕ ರಾಜೇಂಧ ಗೂಢ ಹೇಳಿದ್ದಾರೆ. ಹಣ ಕೊಟ್ಟರೆ ಬಿಎಸ್ಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆ. ಅತೀ ಹೆಚ್ಚು ಹಣ ಕೊಡುವವರಿಗೆ ಬಿಎಸ್ಪಿ ಸೀಟು ಕೊಡುತ್ತದೆ ಎಂದು ಅವರು ಹೇಳಿದರು. ಬಿಎಸ್ಪಿಯಲ್ಲಿ ದೊಡ್ಡ ಮೊತ್ತಕ್ಕೆ ಟಿಕೆಟ್ ಮಾರಲಾಗುತ್ತಿದೆ ಎಂದು ಈ ಹಿಂದೆ ಕೂಡಾ ಪಾರ್ಟಿಯ ಕೆಲವು ನಾಯಕರು ಹೇಳಿದ್ದರು. ಮಾಯಾವತಿಯ ಪಾರ್ಟಿ ಟಿಕೆಟ್ ಮಾರಾಟದ ಫ್ಯಾಕ್ಟರಿಯೆಂದು 2016ರಲ್ಲಿ ಮಾಜಿ ಬಿಎಸ್ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಬಹಿರಂಗಪಡಿಸಿದ್ದರು.
ರಾಜಸ್ಥಾನದ ಆರು ಮಂದಿ ಬಿಎಸ್ಪಿ ಶಾಸಕರಲ್ಲಿ ರಾಜೇಂದ್ರ ಗೂಢ ಒಬ್ಬರು. ಇಲ್ಲಿ ಬಿಎಸ್ಪಿ ಕಾಂಗ್ರೆಸ್ನ ಜೊತೆ ಇದೆ. ಕಾಂಗ್ರೆಸ್ ಇಲ್ಲಿ ಅಧಿಕಾರದಲ್ಲಿದೆ. ರಾಜೇಂದ್ರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.