ಪ್ರವಾದಿ ಪ್ರತಿಕೃತಿ ಸುಡುವುದಾಗಿ ಬೆದರಿಕೆ ಹಾಕಿದ್ದ ಚೋಟಾ ನರಸಿಂಹಾನಂದ್, ಅನಿಲ್ ಯಾದವ್ ಬಂಧನ

0
85

ಸನ್ಮಾರ್ಗ ವಾರ್ತೆ

“ನೀವು ನರಸಿಂಹಾನಂದರ ಪ್ರತಿಕೃತಿಯನ್ನು ಸುಟ್ಟರೆ ನಾವು ಮುಹಮ್ಮದ್ ಮತ್ತು ಅಲಿ ಅವರ ಪ್ರತಿಕೃತಿಯನ್ನು ಸುಡುತ್ತೇವೆ. ಮುಂದಿನ ಬಾರಿ ಅಬೂಬಕರ್ ಅವರ ಪ್ರತಿಕೃತಿಯೂ ಇರಲಿದೆ ಎಂದು ಛೋಟೆ ನರಸಿಂಹಾನಂದರು ಎಚ್ಚರಿಕೆ ನೀಡಿದ್ದರು.

ಪ್ರವಾದಿ ಮುಹಮ್ಮದ್ ಮತ್ತು ಇತರ ಇಸ್ಲಾಮಿಕ್ ಖಲೀಫರ ಪ್ರತಿಕೃತಿಗಳನ್ನು ಸುಡುವುದಾಗಿ ಬೆದರಿಕೆ ಹಾಕಿರುವ ಪ್ರಚೋದನಕಾರಿ ಹೇಳಿಕೆಯ ಮೇರೆಗೆ ಹಿಂದೂ ಅರ್ಚಕ ಅನಿಲ್ ಯಾದವ್ ಅವರನ್ನು ಅಕ್ಟೋಬರ್ 11 ರ ಶುಕ್ರವಾರ ಬೆಳಿಗ್ಗೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಧರ್ಮನಿಂದೆಯ ಹೇಳಿಕೆಳನ್ನು ನೀಡಿದ ಯತಿ ನರಸಿಂಹಾನಂದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಬೆನ್ನಲ್ಲೇ ಅನಿಲ್ ಯಾದವ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಕಾನೂನು ಕ್ರಮಕ್ಕಾಗಿ ಹೆಚ್ಚುತ್ತಿರುವ ಒತ್ತಡ ಮತ್ತು ಕರೆಗಳ ಮೇಲೆ ಪೊಲೀಸರು ಯಾದವ್ ವಿರುದ್ಧ ಹಿಂಸಾಚಾರ ಪ್ರಚೋದನೆಗಾಗಿ ಎಫ್ಐಆರ್ ದಾಖಲಿಸಿದ್ದಾರೆ.