ಯೋಗಿ ಆದಿತ್ಯನಾಥ್‌ರನ್ನು ‘ಬುಲ್ಡೋಝರ್‌ ನಾಥ್’ ಎಂದು ಮರುನಾಮಕರಣ ಮಾಡಿದ ಕಾಂಗ್ರೆಸ್

0
232

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ರನ್ನು ಬುಲ್ಡೋಝರ್ ನಾಥ್ ಎಂದು ಕರೆಯಿರಿ ಎಂದು ಕಾಂಗ್ರೆಸ್ ಹೇಳಿದೆ. ಯುವಕರ ಕನಸ್ಸನ್ನು ಪುಡಿಗುಟ್ಟಿದ ಯೋಗಿಯನ್ನು ಬುಲ್‍ಡೋಝರ್ ನಾಥ್ ಅಲ್ಲದಿದ್ರೆ ಬುಲ್ಡೋಝರ್ ಪ್ರಭು ಎಂದು ಕರೆಯಬೇಕೆಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ನೇತೃತ್ವದಲ್ಲಿ ಲಕ್ನೊದಲ್ಲಿ ನಡೆಯಬೇಕಾಗಿದ್ದ ಐದು ಕಿಲೊ ಮೀಟರ್ ಮ್ಯಾರಥಾನ್ ಓಟಕ್ಕೆ ಲಕ್ನೊ ಪೊಲೀಸರು ಅನುಮತಿ ನಿರಾಕರಿಸಿದ್ದು, ಮಹಿಳೆಯರ ಮುನ್ನಡೆ ‘ಲಡ್ಕಿ ಹೂಂ ಲಡ್ ಶಕ್ತಿ ಹೂಂ’ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ನಡೆಯಲಿಕ್ಕಿತ್ತು. ಅದಕ್ಕೆ ಬಿಡದ್ದಕ್ಕಾಗಿ ಯೋಗಿ ಆದಿತ್ಯನಾಥರನ್ನು ಬುಲ್‍ಡೋಝರ್ ಎಂದು ಹೇಳಿದೆ.

ಲಕ್ನೊದ ಮ್ಯಾರಥಾನ್ ಓಡಬೇಕೆಂಬ ಹೆಣ್ಣು ಮಕ್ಕಳ ಕನಸ್ಸನ್ನು ಮುಖ್ಯಮಂತ್ರಿ ಪುಡಿಗುಟ್ಟಿದರು ಎಂದು ಕಾಂಗ್ರೆಸ್ ಆರೋಪಿಸಿತು. ಯುವಕರ ಕನಸುಗಳನ್ನು ಆದಿತ್ಯನಾಥ್ ನಿರಂತರವಾಗಿ ದಮನಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಫಲಿತಾಂಂಶ ಪ್ರಕಟಿಸದೆ ಯುವಕರ ವಿರುದ್ಧ ಬಲಪ್ರಯೋಗ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತು.