ಕೊನೆಗೂ ರದ್ದಾಯಿತು ಮರಣದಂಡನೆ: ಒಂದುವರೆ ಕೋಟಿ ರಿಯಾಲ್ ಪರಿಹಾರ ಕೊಟ್ಟು ಊರಿಗೆ ಮರಳುತ್ತಿರುವ ರಹೀಮ್

0
339

ಸನ್ಮಾರ್ಗ ವಾರ್ತೆ

ಸೌದಿ ಜೈಲಿನಲ್ಲಿರುವ ಕೇರಳದ ಅಬ್ದುಲ್ ರಹೀಮ್ ಅವರ ಮರಣದಂಡನೆ ಶಿಕ್ಷೆಯನ್ನು ರಿಯಾದ್ ನ್ಯಾಯಾಲಯ ರದ್ದು ಮಾಡಿದೆ.

ಈ ಪ್ರಕರಣದಲ್ಲಿ ಕಕ್ಷಿಗಳಾದ ಎರಡೂ ಗುಂಪಿನ ವಕೀಲರ ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳ ಎದುರು ಪ್ರಕರಣ ರದ್ದು ಪಡಿಸಲಾದ ಪ್ರಕ್ರಿಯೆ ನಡೆಯಿತು.

ಸಾವಿಗೀಡಾದ ಸೌದಿ ಬಾಲಕನ ಕುಟುಂಬದವರು ಪರಿಹಾರ ಮೊತ್ತವನ್ನು ಸ್ವೀಕರಿಸಿ ಅಬ್ದುಲ್ ರಹಿಂಗೆ ಕ್ಷಮೆ ನೀಡಲು ಒಪ್ಪಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

ಸಾವಿಗೀಡಾದ ಬಾಲಕನ ಹೆತ್ತವರು ಪರಿಹಾರ ಮೊತ್ತವನ್ನು ಸ್ವೀಕರಿಸಿ ಅಬ್ದುಲ್ ರಹಿಂಗೆ ಕ್ಷಮೆ ನೀಡಲು ಸಿದ್ದರಾಗಿದ್ದಾರೆ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಹಾಗೆ ಪರಿಹಾರ ಮೊತ್ತವಾಗಿ ಒಂದೂವರೆ ಕೋಟಿ ರಿಯಾಲನ್ನು ನ್ಯಾಯಾಲಯಕ್ಕೆ ಈಗಾಗಲೇ ಒಪ್ಪಿಸಲಾಗಿದೆ. ಇದರ ಬಳಿಕ ನ್ಯಾಯಾಲಯದಿಂದ ಈ ತೀರ್ಪು ಬಂದಿದೆ.

ರಹೀಮ್ ಮತ್ತು ಸಾವಿಗೀಡಾದ ಬಾಲಕನ ಕುಟುಂಬದವರು ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯದ ವಿಧಿ ವಿಧಾನಗಳು ಮುಗಿದ ಬಳಿಕ ರಹೀಮ್ ಅವರ ಬಿಡುಗಡೆ ಮಾಡಿ ನೇರವಾಗಿ ಊರಿಗೆ ಕಳುಹಿಸಿಕೊಡಲಾಗುವುದು.