ಸನ್ಮಾರ್ಗ ವಾರ್ತೆ
ದೆಹಲಿ ಮುಖ್ಯಮಂತ್ರಿಗಳ ನಿವಾಸವನ್ನು ಬಿಜೆಪಿ ಆದೇಶದ ಮೇರೆಗೆ ಬಲವಂತವಾಗಿ ಖಾಲಿ ಮಾಡಿಸಲಾಗಿದ್ದು, ಇದನ್ನು ಬಿಜೆಪಿ ಪಕ್ಷದ ನಾಯಕನಿಗೆ ಹಂಚಿಕೆ ಮಾಡಲು ಬಯಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಬುಧವಾರ ಪ್ರಕಟಣೆಯಲ್ಲಿ ಆರೋಪಿಸಿದೆ.
ಅತಿಶಿ ಅವರ ಮನೆಯಿಂದ ಅವರ ವಸ್ತುಗಳನ್ನು ತೆಗೆದು ಹಾಕಲಾಗಿದೆ ಎಂದು ಸಿಎಂಒ ತಿಳಿಸಿದೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ವಾಸವಿದ್ದ ಈ ಮನೆಯನ್ನು ಅತಿಶಿ ಅವರಿಗೆ ಹಂಚಿಕೆ ಮಾಡಲಾಗಿತ್ತು.
ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಈ ಬಂಗಲೆ ಮಂಜೂರು ಮಾಡುವ ಉದ್ದೇಶದಿಂದ ಸಿಎಂ ನಿವಾಸವನ್ನು ಬಲವಂತವಾಗಿ ಖಾಲಿ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಗಳ ಕಚೇರಿ ದೂರಿದೆ.
ಈ ಆರೋಪಗಳಿಗೆ ಬಿಜೆಪಿ ಪಕ್ಷವಾಗಲೀ, ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದಾಗಲೀ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
https://x.com/ANI/status/1843999641467281681?t=YOBvXJKdHOD5BHI8gu7lZg&s=19