ಜಮಾಅತೆ ಇಸ್ಲಾಮಿ ಹಿಂದ್ ಗದಗ ಜಿಲ್ಲಾ ಸಂಚಾಲಕ ಅಕ್ಬರ್ ಅಲಿ ಇಂಡಿಕಾರ್ ನಿಧನ

0
485

ಸನ್ಮಾರ್ಗ ವಾರ್ತೆ

ಗದಗ: ಜಮಾಅತೆ ಇಸ್ಲಾಮೀ ಹಿಂದ್ ಗದಗ ಜಿಲ್ಲಾ ಸಂಚಾಲಕರಾಗಿದ್ದ ಅಕ್ಬರ್ ಅಲಿ ಇಂಡಿಕರ್ ಅವರು ಇಂದು ನಿಧನರಾದರು.

ಅವರಿಗೆ 45 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಬಾಧಿತರಾಗಿದ್ದ ಅವರು ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗುವಿನ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಎಸ್.ಐ.ಓ. ವಿದ್ಯಾರ್ಥಿ ಸಂಘಟನೆಯಲ್ಲಿರುವಾಗಲೇ ಸಾಮಾಜಿಕ ಕಾಳಜಿ ಹೊಂದಿದ್ದ ಇವರು, ಮಿತಭಾಷಿ, ಚಿಂತನಶೀಲ ವ್ಯಕ್ತಿ. ಸಾಮಾಜಿಕ ಕಾಳಜಿಯನ್ನು ಹೊಂದಿ ಪರಿಶ್ರಮಿಸುತ್ತಿದ್ದವರು. ಸನ್ಮಾರ್ಗ ಪತ್ರಿಕೆಯ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದ ಇವರು, ಸ್ಥಳೀಯವಾಗಿ ಎಲ್ಲ ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಅಲ್ಲಾಹನು ಅವರ ಸತ್ಕರ್ಮಗಳನ್ನು ಸ್ವೀಕರಿಸಿಲಿ. ಅವರಿಗೆ ಮಘ್ಫಿರತ್ ಮತ್ತು ಮರ್ಹಮತ್ ನೀಡಲಿ. ಅವರ ಕುಟುಂಬಕ್ಕೆ ಸಹನೆಯನ್ನು ದಯಪಾಲಿಸಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್, ಸೋಲಿಡಾರಿಟಿ ಯೂಥ್ ಮೂಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ, ಎಸ್ ಐ ಓ ರಾಜ್ಯಾಧ್ಯಕ್ಷ ಶೆಹಝದ್ ಶಕೀಬ್ ಮುಲ್ಲಾ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.