ಮುಸ್ಲಿಂ ಆಂಕರ್ ನನ್ನು ನೋಡದಿರಲು ಕಣ್ಣಿಗೆ ಕೈ ಅಡ್ಡ ಇಟ್ಟ ಹಂ ಹಿಂದೂ ನಾಯಕ; ಚಾನೆಲ್ ತೀರ್ಮಾನ ಏನು ಗೊತ್ತೇ?

0
1048

ಹೊಸದಿಲ್ಲಿ, ಆ. 2: ಚ್ಯಾನೆಲ್ ಚರ್ಚೆಯ ವೇಳೆ ಮುಸ್ಲಿಂ ಆಂಕರ್ ನನ್ನು ನೋಡದಿರಲು ಹಂ ಹಿಂದೂ ನಾಯಕ ಕಣ್ನು ಮುಚ್ಚಿಕೊಂಡ ಘಟನೆ ನಡೆದಿದೆ. ಝೋಮೆಟೊ ವಿಷಯಕ್ಕೆ ಸಂಬಂಧಿಸಿದ ನ್ಯೂಸ್ 24 ಎಂಬ ಹಿಂದಿ ಚ್ಯಾನೆಲ್ ನ ಚರ್ಚೆಯ ವೇಳೆ ಹಂ ಹಿಂದೂ ನಾಯಕ ಅಜಯ್ ಗೌತಂ ತನ್ನ ಎರಡೂ ಕೈಗಳನ್ನು ಕಣ್ಣಿಗೆ ಅಡ್ಡ ಹಿಡಿದಿದ್ದಾರೆ.

ಝೊಮೆಟೊದ ಹಿಂದೂಯೇತರ ಡೆಲಿವರಿ ಬಾಯ್ ತಂದ ಆಹಾರವನ್ನು ಸ್ವೀಕರಿಸದೆ ಮರಳಿಸಿದ ಅಮಿತ್ ಶುಕ್ಲ ಎಂಬ ಯುವಕನ ಕುರಿತು ಸುದ್ದಿ ವರದಿಯಾದ ಬೆನ್ನಿಗೇ ಈ ಹೊಸ ವಿವಾದ ಹುಟ್ಟಿಕೊಂಡಿದೆ. ಸವೂದ್ ಮುಹಮ್ಮದ್ ಖಾಲಿದ್ ಎಂಬ ಇನ್ನೊಬ್ಬ ಆಂಕರ್ ಗೆ ಆಂಕರ್ ಸಂದೀಪ್ ಚೌಧರಿ ಚರ್ಚೆಯನ್ನು ವರ್ಗಾಯಿಸಿದಾಗ ಈ ಘಟನೆ ನಡೆದಿದ್ದು ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟರ್ ನಲ್ಲಿ ಹಲವು ಮಂದಿ ಅಜಯ್ ಗೌತಂ ವಿರುದ್ಧ ಟೀಕಾ ಪ್ರಹಾರ ಹರಿಸಿದ್ದಾರೆ.

ಅಜಯ್ ಗೌತಂರನ್ನು ಇನ್ನು ಮುಂದೆ ಚರ್ಚೆಗಳಿಗೆ ಕರೆಯುವುದಿಲ್ಲ ಎಂದು ಚ್ಯಾನೆಲ್ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಸಂಪೂರ್ಣ ಹಿಂದೂ ರಾಷ್ಟ್ರ ಘೋಷಣೆ ಮಾಡಿಕೊಂಡ ಸಂಘಟನೆ ಹಂ ಹಿಂದೂ ಆಗಿದೆ ಎಂದು ಇವರ ವೆಬ್ ಸೈಟ್ ಹೇಳಿಕೊಂಡಿದೆ.