ಸಮಾಜವು ಒಳಿತಿನೆಡೆಗೆ ಸಾಗಬೇಕಾದರೆ, ಧರ್ಮ ದೇವರ ಬಗ್ಗೆ ಅರಿಯುವುದು ಅನಿವಾರ್ಯ: ಶ್ರೀ ಗುರುಪಾದ ಮಹಾಸ್ವಾಮಿಗಳು

0
133

ಸನ್ಮಾರ್ಗ ವಾರ್ತೆ

ರೋಣ : “ಧರ್ಮ ದೇವರು ಆಧ್ಯಾತ್ಮ ಈ ಕುರಿತು ನಾವು ಗರಿಷ್ಠ ತಿಳಿಯಲು ಪ್ರಯತ್ನಿಸಬೇಕು ಆಗ ನಮ್ಮ ಸಮಾಜವು ಒಳಿತಿನ ದಿಸೆಯಲ್ಲಿ ಸಾಗುತ್ತದೆ” ಎಂದು ಗುಲಗಂಜಿ ಮಠದ ಶ್ರೀ ಗುರುಪಾದ ಮಹಾಸ್ವಾಮಿಗಳು ಹೇಳಿದರು.

ಅವರು 18ನೇ ವಾರ್ಡ್ ಕುರುಬಗಲ್ಲಿ ಹಾಗೂ ಶಾಂತಿ ನಗರ ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸೀರತುನ್ನಬೀ (ಸ) ಸಮಾವೇಶಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಖ್ಯಾತ ಪ್ರವಚನಕಾರರಾದ ಲಾಲ್ ಹುಸೇನ್ ಕಂದಗಲ್ “ಪ್ರವಾದಿಯವರು ಮಾನವ ಸಮೂಹವನ್ನು ಎಲ್ಲಾ ರೀತಿ ಯಾದಂತಹ ದೌರ್ಜನ್ಯ, ದಬ್ಬಾಳಿಕೆ ಹಾಗೂ ಶೋಷಣೆಗಳಿಂದ ಮುಕ್ತಗೊಳಿಸಿದರು, ಅವರು ಮಾನವ ಕುಲದ ವಿಮೋಚಕರಾಗಿದ್ದಾರೆ” ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಜ.ಇ ಹಿಂದ್ ಕರ್ನಾಟಕ ರಾಜ್ಯ ಜತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ “ಪ್ರವಾದಿ (ಸ) ರವರು ಸಕಲ ಮಾನವರಿಗೆ ಮಾತ್ರವಲ್ಲ ಎಲ್ಲ ಜೀವಿಗಳ ಪಾಲಿಗೂ ಅತ್ಯಂತ ಕರುಣಾಮಯಿಯಾಗಿದ್ದರು‌. ಅವರ ಒಂದೊಂದು ಬೋಧನೆಯನ್ನು ನಮ್ಮ ಜೀವನದಲ್ಲಿ ಪಾಲಿಸಲು ನಾವೆಲ್ಲ ಗರಿಷ್ಠ ಪ್ರಯತ್ನಿಸಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಂ.ಎಂ ಯಲಿಗಾರ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪ್ರಕಾಶ್ ಬನಕಾರ ಪಿಎಸ್ಐ ರೋಣ. ಬಾವಾ ಸಾಬ್ ಬೆಟಿಗೇರಿ, ಅಧ್ಯಕ್ಷರು ಅಂಜುಮನ್ ಸಂಸ್ಥೆ , ಶ್ರೀಮತಿ ಬಸಮ್ಮ ಕೊಪ್ಪದ ಪುರಸಭೆ ಸದಸ್ಯರು, ಬಸವರಾಜ ಸುಂಕದ ಮುಂತಾದರು ಉಪಸ್ಥಿತರಿದ್ದರು.