ಚುನಾವಣೆಯಲ್ಲಿ ಸೋಲು; ಝಾರ್ಕಂಡ್ ಬಿಜೆಪಿ ಅಧ್ಯಕ್ಷ ರಾಜೀನಾಮೆ

0
523

ಸನ್ಮಾರ್ಗ ವಾರ್ತೆ-

ರಾಂಚಿ, ಡಿ. 26: ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದಕ್ಕೆ ಹೊಣೆ ಹೊತ್ತು ಝಾರ್ಕಂಡ್ ಬಿಜೆಪಿ ಅಧ್ಯಕ್ಷ ಲಕ್ಷಮಣ ಗಿಲುವ ರಾಜೀನಾಮೆ ನೀಡಿದ್ದಾರೆ. ಅಮಿತ್ ಶಾರಿಗೆ ತನ್ನ ರಾಜೀನಾಮೆ ಪತ್ರವನ್ನು ಕಳುಹಿಸಿದ್ದು ಅವರು ಚಕ್ರಧರಪುರ ವಿಧಾನಸಭೆಗೆ ಸ್ಪರ್ಧಿಸಿ ಅಲ್ಲಿಯೂ ಸೋತಿದ್ದರು. 81 ಶಾಸಕರ ವಿಧಾನಸಭೆಯಲ್ಲಿ ಹೇಮಂತ್ ಸೊರೆನ್‍ರ ಜೆಎಂಎಂ ಕಾಂಗ್ರೆಸ್ ಆರ್‍ಜೆಡಿ ಸಖ್ಯ 47 ಸೀಟುಗಳನ್ನು ಪಡೆದಿದೆ. ಬಿಜೆಪಿ 25 ಸೀಟುಗಳನ್ನಷ್ಟೇ ಪಡೆದಿದೆ.

ಜೆಎಂಎಂ ಅಧ್ಯಕ್ಷ ಹೇಮಂತ್ ಸೊರೆನ್ ರಾಜ್ಯಪಾಲ ದ್ರೌಪತಿ ಮುರ್ಮುರನ್ನು ಭೇಟಿಯಾಗಿ ಸರಕಾರ ರಚಿಸುವ ಹಕ್ಕು ಮಂಡಿಸಿದರು. ಡಿಸೆಂಬರ್ 29ಕ್ಕೆ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ಹೇಮಂತ್ ಸೋರೆನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.