ಮಹಾತ್ಮಾ ಗಾಂಧೀಜಿ ಕುರಿತು ಆಕ್ಷೇಪಾರ್ಹ ಹೇಳಿಕೆ: ಕಾಳಿಚರಣ್ ಬಂಧನ

0
251

ಸನ್ಮಾರ್ಗ ವಾರ್ತೆ

ರಾಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಹತ್ಯೆಗೈದ ಗೋಡ್ಸೆಯನ್ನು ಹೊಗಳಿ ಸೆಲ್ಯೂಟ್ ಹೊಡೆಯುವುದಾಗಿ ಹೇಳಿದ ಕಾಳಿಚರಣ್ ಮಹಾರಾಜ ಎಂಬವರನ್ನು ಛತ್ತೀಸ್‍ಗಡ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಖಜೂರಾಹೊದಿಂದ ಇವರನ್ನು ಕಸ್ಟಡಿಗೆ ಪಡೆಯಲಾಗಿದ್ದು ಅವರ ವಿರುದ್ಧ ಗಾಂಧಿ ಆಕ್ಷೇಪಕ್ಕಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

ಖಜೂರಾಹೊದ ಬಾಡಿಗೆ ಮನೆಯಿಂದ ಕಾಳಿಚರಣರನ್ನು ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಬಂಧಿಸಲಾಯಿತು. ಧಾರ್ಮಿಕ ವೈಶಮ್ಯವನ್ನು ಬೆಳೆಸಲು ಶ್ರಮಿಸಿದ್ದಾಗಿ ಇತ್ಯಾದಿ ಸೆಕ್ಷನ್‍ಗಳನ್ನು ಅವರ ವಿರುದ್ಧ ಪೊಲೀಸರು ಹೊರಿಸಿದ್ದಾರೆ.

ಇತ್ತೀಚೆಗೆ ಎರಡು ದಿವಸಗಳ ಧರ್ಮ ಸಂಸತ್ತು ಶಿಬಿರದಲ್ಲಿ ಕಾಳಿಚರಣ್ ಮಹಾರಾಜ್ ವಿವಾದ ಭಾಷಣ ಮಾಡಿದ್ದರು. ಮೋಹನ್ ದಾಸ್ ಕರಮಚಂದ್ ಗಾಂಧಿ ದೇಶವನ್ನು ನಾಶಪಡಿಸಿದರು. ಅವರನ್ನು ಕೊಂದ ನಾಥುರಾಂ ಗೋಡ್ಸ್ ಅಭಿನಂದನಾರ್ಹ ಎಂದು ಕಾಳಿಚರಣ್ ಹೇಳಿದ್ದರು. ಕೇಸು ದಾಖಲಿಸಿದರೂ ತನ್ನ ಅಭಿಪ್ರಾಯ ಬದಲಿಸಲಾರೆ ಮತ್ತು ವಿಷಾದಿಸಲಾರೆ ಎಂದು ಅವರು ಹೇಳಿದ್ದರು. ಮಹಾರಾಷ್ಟ್ರ ಎನ್‍ಸಿಪಿ ನಾಯಕ ಸಚಿವ ಜಿತೇಂದ್ರ ಔಹಾನ್ ನೀಡಿದ ದೂರಿನಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು.