ಕಾಂಗ್ರೆಸ್ ಸೋಲಿನ ಕುರಿತು ಅವಲೋಕನ ನಡೆಸಬೇಕು- ಕಪಿಲ್ ಸಿಬಲ್

0
273

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುಂಡಿದ್ದು ಫಲಿತಾಂಶ ಪ್ರಕಟವಾದ ಕೆಲವು ದಿನಗಳ ಬಳಿಕ ಕಾಂಗ್ರೆಸ್‍ನ ಹಿರಿಯ ನಾಯಕ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯು ನಡೆದ ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರದರ್ಶನವನ್ನು ಅವಲೋಕನ ನಡೆಸಬೇಕೆಂದು ನಾಯಕತ್ವಕ್ಕೆ ಅವರು ಆಗ್ರಹಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದು ಉತ್ತಮ ಪ್ರದರ್ಶನವಾಗಿಲ್ಲ. ಅಸ್ಸಾಮ್, ಕೇರಳದಲ್ಲಿ ಕಾಂಗ್ರೆಸ್ ಸೋತಿದೆ. ಪಶ್ಚಿಮಬಂಗಾಳದಲ್ಲಿ ಒಂದು ಸ್ಥಾನ ಕೂಡ ಸಿಕ್ಕಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು. ಪಾರ್ಟಿಯೊಳಗೆ ಧ್ವನಿ ಎತ್ತಿದಾಗ ಅದನ್ನು ಆಲಿಸುವ ಮನಸ್ಥಿತಿ ಇರಬೇಕೆಂದು ಅವರು ಹೇಳಿದರು.

ಚುನಾವಣೆ ಬೇರೆ ವಿಷಯ. ಹೆಚ್ಚು ಈಗಲ್ಲ ಇನ್ನೊಮ್ಮೆ ಹೇಳುತ್ತೇನೆ. ಕೊರೋನದ ನಡುವೆ ಸಾವು ಬದುಕುಗಳ ಹೋರಾಟ ನಡೆಯುತ್ತಿರುವುದೇ ಮುಖ್ಯ ವಿಷಯ ಎಂದು ಅವರು ಹೇಳಿದರು.