ಬಿಷ್ನೋಯ್ ಗ್ಯಾಂಗ್ ಇನ್ನು ರಾಹುಲ್ ಗಾಂಧಿಯನ್ನು ಗುರಿ ಮಾಡಲಿ: ಒಡಿಸ್ಸಾ ನಟನ ಪೋಸ್ಟ್ ಗೆ ಆಕ್ರೋಶ: ಕೇಸು ದಾಖಲು

0
88

ಸನ್ಮಾರ್ಗ ವಾರ್ತೆ

ಬಾಬಾ ಸಿದ್ದಿಕಿಯನ್ನು ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ ಹತ್ಯೆ ಮಾಡಿದೆ. ಅದರ ಮುಂದಿನ ಗುರಿ ರಾಹುಲ್ ಗಾಂಧಿಯಾಗಬೇಕು ಎಂದು ಬರೆದು ಓಡಿಸ್ಸಾ ನಟ ಬುದ್ದಾದಿತ್ಯ ಮಹಂತಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅವರ ವಿರುದ್ಧ ಎನ್ಎಸ್ ಯುಐ ಕೇಸು ದಾಖಲಿಸಿದೆ. ತನ್ನ ಫೇಸ್ ಬುಕ್ ಪೋಸ್ಟ್ ವಿವಾದವನ್ನು ಹುಟ್ಟು ಹಾಕುತ್ತಿರುವಂತೆ ಅವರು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಇದೇ ವೇಳೆ ಈ ಪೋಸ್ಟ್ ನ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವಂತೆಯೇ ಪೋಸ್ಟ್ ಡಿಲೀಟ್ ಮಾಡಿದ ನಟ ಸಾರ್ವಜನಿಕವಾಗಿ ಕ್ಷಮೆಯನ್ನು ಕೋರಿದ್ದಾರೆ.

ನನ್ನ ಪೋಸ್ಟು ರಾಹುಲ್ ಗಾಂಧಿಯನ್ನು ಗುರಿ ಮಾಡುವುದಕ್ಕೋ ಅಥವಾ ಅಪಮಾನಿಸುವುದಕ್ಕೋ ಆಗಿರಲಿಲ್ಲ. ನಾನು ಈ ಉದ್ದೇಶದಿಂದ ಪೋಸ್ಟ್ ಹಾಕಿರಲಿಲ್ಲ. ನನ್ನ ಪೋಸ್ಟ್ ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ ಎಂದು ನಟ ಹೇಳಿದ್ದಾರೆ.

ಅಕ್ಟೋಬರ್ 12ರಂದು ಬಾಬಾ ಸಿದ್ದೀಕಿ ಅವರ ಹತ್ಯೆ ನಡೆದಿತ್ತು. ಇವರು ಮಹಾರಾಷ್ಟ್ರದ ಆಡಳಿತರೂಢ ಮೈತ್ರಿಕೂಟದ ಭಾಗವಾಗಿರುವ ಅಜಿತ್ ಪವಾರ್ ಅವರ ಪಕ್ಷದ ನಾಯಕರಾಗಿದ್ದರು.