ಸನ್ಮಾರ್ಗ ವಾರ್ತೆ
ಪ್ರತೀ ವರ್ಷ ದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗುವ ಎಸ್. ಎಸ್. ಎಲ್. ಸಿ, ಪಿ.ಯು.ಸಿ ಟಾಪರ್ಸ್, ಇತರ ಇನ್ಸ್ಟಿಟ್ಯೂಶನ್ಸ್ ಎಕ್ಸಲೆನ್ಸ್ ಅವಾರ್ಡ್, ಪ್ರತಿಭಾ ಪುರಸ್ಕಾರ ಮತ್ತು ಫ್ರೀ ಸೀಟ್ಸ್ ವಿತರಣೆ ಸಮಾರಂಭದಲ್ಲಿ ಭಾಗವಹಿಸವಂತೆ ವಸತಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಬಿ. ಝೆಡ್. ಝಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಆಹ್ವಾನಿಸಲಾಯಿತು.
ಮೀಫ್ ಕಾರ್ಯ ವೈಖರಿ, ಶೈಕ್ಷಣಿಕ ಸೇವೆಗೆ ಮೆಚ್ಚುಗೆ ಸೂಚಿಸಿದ ಸಚಿವರುಗಳು ಸಮಾರಂಭದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿರುತ್ತಾರೆ.
ಗೌರವಾಧ್ಯಕ್ಷ ಉಮರ್ ಟೀಕೇ, ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಉಪಾಧ್ಯಕ್ಷ ಮುಸ್ತಫ ಸುಳ್ಯ, ಬ್ಯಾರಿಸ್ ವೆಲ್ಫೇರ್ ನ ಅತ್ತೂರು ಚಾಯಬ್ಬ, ಇಕ್ಬಾಲ್ ಬೆಂಗಳೂರು ಮೊದಲಾವರು ಉಪಸ್ಥಿತರಿದ್ದರು.