ಆದಿಚುಂಚನಗಿರಿಯಲ್ಲಿ ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ ಪುಸ್ತಕದ ಬಿಡುಗಡೆ ಮತ್ತು ಸ್ವಾಮೀಜಿಯವರೊಂದಿಗೆ ವಿಚಾರ ವಿನಿಮಯ

0
128

ಸನ್ಮಾರ್ಗ ವಾರ್ತೆ

ದೇಶದಾದ್ಯಂತ ನೂರಾರು ಕಡೆಗಳಲ್ಲಿ ವ್ಯಾಪಿಸಿರುವ ಆದಿ ಚುಂಚನಗಿರಿ ಮಠಗಳ ಕೇಂದ್ರ ಆಸ್ಥಾನದಲ್ಲಿ ಇಂದು(ಸೀರತ್ ಅಭಿಯಾನದ ಕೊನೆಯ ದಿನ, ಸೆಪ್ಟೆಂಬರ್ 22 ರಂದು) ಬೆಳಿಗ್ಗೆ ಜ.ಇ. ಹಿಂದ್ ಮೈಸೂರು ನಗರ ಸ್ಥಾನೀಯ ಶಾಖೆಯ ವತಿಯಿಂದ ಮಠದ ಮುಖ್ಯಸ್ಥರಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರನ್ನು ಸಂದರ್ಶಿಸಿ ಸೀರತ್ ಅಭಿಯಾನ ಪ್ರಯುಕ್ತ ಶಾಂತಿ ಪ್ರಕಾಶನ ಹೊರತಂದಿರುವ “ಪ್ರವಾದಿ ಮುಹಮ್ಮದ್(ಸ) ಲೇಖನ ಸಂಕಲನ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿವಿಧ ಪ್ರವಾದಿಗಳ ಬಗ್ಗೆ ವಿಶೇಷವಾಗಿ ಪ್ರವಾದಿ ಮುಹಮ್ಮದ್(ಸ)ರಕುರಿತು ಸುಮಾರು ಅರ್ಧ ಗಂಟೆಗಳ ಕಾಲ ಅವರು ತನ್ನ ಪೀಠದಲ್ಲಿ ಕುಳಿತುಕೊಂಡು ಸಂದರ್ಶಕರ ಸಮ್ಮುಖದಲ್ಲಿ ವಿಚಾರವಿನಿಮಯ ನಡೆಸಿದರು.

ಜಮಾಅತ್ ತಂಡದಲ್ಲಿ ಮೈಸೂರು ವಲಯ ಸಂಚಾಲಕರು, ಮೈಸೂರು ಸ್ಥಾನೀಯ ಉಪಾಧ್ಯಕ್ಷರಾದ ಅಸದುಲ್ಲಾ, ಉಮೇದುವಾರ ಸದಸ್ಯರಾದ ಅಬ್ದುಲ್ ವಾಹಿದ್ ಅಲಿ, ಹಿರಿಯ ಕಾರ್ಯಕರ್ತರಾದ ಫಯಾಝ್ ಮಲಿಕ್ ಹಾಗೂ ಈ ದಿನ ಡಾಟ್ ಕಾಮಿನ ಮೋಹನ್ ರವರು ಉಪಸ್ಥಿತರಿದ್ದರು. ಜಮಾಅತ್ ತಂಡದ ವತಿಯಿಂದ ಸ್ವಾಮೀಜಿಯವರಿಗೆ ಫಲಗುಚ್ಛವನ್ನು ನೀಡಿ ಗೌರವಿಸಲಾಯಿತು.