ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.1:ದೆಹಲಿಯ ನೀತಿ ಆಯೋಗ್ ಅಧಿಕಾರಿಗೆ ಕೊರೋನಾ ದೃಢಪಟ್ಟಿದ್ದು, ಕಚೇರಿಯ ಮೂರನೆ ಮಹಡಿಯನ್ನು ಸೀಲ್ಡೌನ್ ಮಾಡಲಾಗಿದೆ. ಕಚೇರಿ ಸೋಂಕು ಮುಕ್ತಗೊಳಿಸಿದ ಬಳಿಕವೇ ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ವಿದೇಶ ಸಚಿವಾಲಯದ ಇಬ್ಬರಿಗೆ ಕೊರೋನಾ ದೃಢವಾಗಿತ್ತು. ದೆಹಲಿಯ ಸೆಂಟ್ರಲ್ ಯುರೋಪ್ ಡಿವಿಷನ್ನ ಕನ್ಸಲ್ಟೆಂಟ್, ಲಾ ಡಿವಿಷನ್ನ ಲೀಗಲ್ ಅಧಿಕಾರಿಗೆ ಕೊರೋನ ಸೋಂಕು ತಗುಲಿತ್ರು. ಸಿ.ಇ ಡಿವಿಷನ್ನ ಇತರ ಸಿಬ್ಬಂದಿಗಳೊಂದಿಗೆ ಹದಿನಾಲ್ಕು ದಿವಸ ನಿಗಾದಲ್ಲಿರಲು ತಿಳಿಸಲಾಗಿದೆ.
ದೆಹಲಿಯಲ್ಲಿ ಇದುವರೆಗೆ 20,000 ಮಂದಿಗೆ ಕೊರೋನ ದೃಢವಾಗಿದ್ದು, ರವಿವಾರ 1295 ಮಂದಿಗೆ ಹೊಸದಾಗಿ ಕೊರೋನ ಸೋಂಕು ತಗುಲಿದ್ದು, ದೆಹಲಿಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 19,844ಕ್ಕೆ ತಲುಪಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.