ಕಟಕ್, ಜು. 30: ಬಿಜೆಡಿ ಸಂಸದ ಅನುಭವ್ ಮೊಹಂತಿ ಮತ್ತು ಸಹೋದರ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರಕರ್ತೆ ಸಸ್ಮಿತಾ ಆಚಾರ್ಯ ಡಿಸಿಪಿಗೆ ದೂರು ನೀಡಿದ್ದಾರೆ. ಆದರೆ ತನ್ನ ದೂರನ್ನು ಕಡೆಗಣಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸಧಿಕಾರಿಯನ್ನು ಭೇಟಿಯಾದ ಬಳಿಕ ಸಸ್ಮಿತಾ ಹೇಳಿದರು.
“ನನಗೆ ಕೋರ್ಟಿಗೆ ಹೋಗುವಂತೆ ಡಿಸಿಪಿ ಹೇಳಿದರು. ಸಂಸದ, ಮುಖ್ಯಮಂತ್ರಿ, ಪೊಲೀಸರು ಕೇಸನ್ನು ಮೂಲೆಗೆ ಸೇರಿಸಲು ಯತ್ನಿಸುತ್ತಿದ್ದಾರೆ” ಎಂದು ಸಸ್ಮಿತಾ ಆರೋಪಿಸಿದರು. ತನಗೆ ಎಫ್ಐಆರ್ ನಲ್ಲಿ ಸಿಕ್ಕಿದ ವಿವರಗಳು ಮತ್ತು ತನಗೆ ಸಿಕ್ಕಿರುವ ಎಫ್ಐಆರ್ ಪ್ರತಿಯ ವಿವರಗಳಲ್ಲಿ ಪರಸ್ಪರ ವೈರುಧ್ಯವಿದೆ ಎಂದು ಹೇಳಿ ಜುಲೈ ಹದಿನಾಲ್ಕರಂದು ಸಸ್ಮಿತಾ ಪುರಿಘಟ್ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದಾರೆ. ಸಸ್ಮಿತಾರ ದೂರಿನ ಅಡಿಯಲ್ಲಿ ಅನುಭವ್ ಮೊಹಾಂತಿ ಅನುಪ್ರಾಶ್, ಸಂಸದರ ಪತ್ನಿ ಚಲಚಿತ್ರ ನಟಿ ಬರ್ಷ ಪ್ರಿಯದರ್ಶಿನಿ ವಿರುದ್ಧ ಜೂನ್ 13ಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇದೇವೇಳೆ, ತನ್ನ ಹಾಗೂ ಕುಟುಂಬ ಸದಸ್ಯರ ವಿರುದ್ಧ ಎದ್ದಿರುವ ಆರೋಪವನ್ನು ಬಿಜೆಡಿ ಸಂಸದ ಅನುಭವ್ ಮೊಹಾಂತಿ ನಿರಾಕರಿಸಿದ್ದಾರೆ.