ಎನ್‍ಪಿಆರ್ ನಲ್ಲಿ ಬಿಜೆಪಿಯ ನಿಗೂಢ ಉದ್ದೇಶ ಇದೆ- ಪಿಚಿದಂಬರಂ

0
1038

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 26: ಕೇಂದ್ರ ಬಿಜೆಪಿ ಸರಕಾರ ಎನ್‍ಪಿಆರ್ ಜಾರಿಗೆ ಮುಂದಾಗಿದ್ದು ನಿಗೂಢ ಉದ್ದೇಶದಲ್ಲಿ ಎಂದು ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಹೇಳಿದರು. 2010ರಲ್ಲಿ ಯುಪಿಎ ಸರಕಾರ ತಂದ ಎನ್‍ ಪಿ ಆರ್ ಇದಲ್ಲ.

2010ರಲ್ಲಿ ಯುಪಿಎ ಸರಕಾರ ಎನ್‍ಪಿಆರ್ ಮ೦ಡಿಸುವ ವೇಳೆ ಗೃಹ ಸಚಿವರಾಗಿ ಇದ್ದವರು ಚಿದಂಬರಂ. ಅದನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಳೆದ ದಿವಸ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಚಿದಂಬರಂ ಬಿಜೆಪಿ ನಿಗೂಢ ಉದ್ದೇಶದೊಂದಿಗೆ ಎನ್ ಪಿ ಆರ್ ತರುತ್ತಿದೆ ಎಂದು ಚಿದಂಬರಂ ಹೇಳಿದರು. ಹಳೆಯ ವೀಡಿಯೊ ಈಗ ಬಿಜೆಪಿ ಹೊರ ತಂದಿದೆ. ಸಂತೋಷ. ವೀಡಿಯೊ ನೋಡಿ. 2011ರ ಜನಗಣತಿ ಮುಂಚೆ ವಾಸಿಸುವವರ ಲೆಕ್ಕಕ್ಕಾಗಿ ನಾವು ಎನ್‍ಪಿಆರ್ ತಂದದ್ದು. ಪೌರತ್ವ ಪಟ್ಟಿಗಾಗಿ ತಂದಿಲ್ಲ. ಪೌರತ್ವ ಪಟ್ಟಿಯ ಮಾತೇ ಆಡಿಲ್ಲ ಎಂದು ಚಿದಂಬರಂ ಹೇಳಿದರು. ಎನ್‍ಪಿಆರ್ ಅನ್ನು ವಿವಾದಿತ ಎನ್ ಆರ್ ಸಿಗೆ ಕೇಂದ್ರ ಸರಕಾರ ಜೋಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.