ಸಂಸತ್ ಉದ್ಘಾಟನೆ: ಇದೇನು ಪಟ್ಟಾಭಿಷೇಕವೇ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ

0
270

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೂತನ ಸಂಸತ್‌ ಭವನ ಉದ್ಘಾಟನೆಯನ್ನು ತಮ್ಮ ಪಟ್ಟಾಭಿಷೇಕವೆಂದು ಪ್ರಧಾನಿ ನರೇಂದ್ರ ಮೋದಿ ಭಾವಿಸಿದ್ದಾರೆಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತು ಜನರ ಧ್ವನಿ. ಸಂಸತ್ ಭವನದ ಉದ್ಘಾಟನೆಯನ್ನು ಪ್ರಧಾನಿ ಮಹಾಮಸ್ತಕಾಭಿಷೇಕ ಎಂದು ಭಾವಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪಟ್ಟಾಭಿಷೇಕ ಮುಗಿಯಿತು. ಬೀದಿಗಿಳಿದು ಪ್ರತಿಭಟಿಸುವ ಸಾರ್ವಜನಿಕರ ದನಿಯನ್ನು ತುಳಿಯುತ್ತಿರುವ ‘ಅಹಂಕಾರಿ ರಾಜ’ ಮೋದಿ ಎಂದು ಹೊಸ ಸಂಸತ್‌ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದ ಕುಸ್ತಿಪಟುಗಳ ಬಂಧನವನ್ನು ಖಂಡಿಸಿ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.