ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಎನ್ ಆರ್ ಸಿ ಜಾರಿಗೊಳಿಸದಿರುವ ನಿರ್ಧಾರ ತೆಗೆದುಕೊಳ್ಳಿ- ರಾಹುಲ್ ಗಾಂಧಿಗೆ ಹೇಳಿದ ಪ್ರಶಾಂತ್ ಕಿಶೋರ್

0
826

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 24:CAA ಮತ್ತು NRC ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜನತಾದಳ (ಯು) ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಟೀಕಿಸಿದ್ದು, ರಾಹುಲ್ ಗಾಂಧಿಯವರು ಪೌರತ್ವ ಕಾನೂನಿನ ಕುರಿತು ದೃಢ ನಿಲುವು ತಳೆಯಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಎನ್‍ಆರ್ ಸಿ ಜಾರಿಗೊಳಿಸುವುದಿಲ್ಲ ಎಂದು ಪಕ್ಷದ ರಾಜ್ಯ ಅಧ್ಯಕ್ಷರ ಮೂಲಕ ಅಧಿಕೃತವಾಗಿ ಹೇಳಿಸಲು ರಾಹುಲ್ ಸಿದ್ಧರೇ ಎಂದು ಅವರು ಟ್ವೀಟ್ ಮಾಡಿ ಪ್ರಶ್ನಿಸಿದರು.

ಸಿಎಎಗೆ ಮತ್ತು ಎನ್ ಆರ್ ಸಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ರಾಹುಲ್ ಗಾಂಧಿಗೆ ಕೃತಜ್ಞತೆಗಳು. ಎನ್ ಆರ್ ಸಿ ನಿಲ್ಲಿಸುತ್ತೇವೆ ಎಂದು ರಾಜ್ಯ ಸರಕಾರಗಳು ಘೋಷಿಸಬೇಕು. ಕಾಂಗ್ರೆಸ್ ಆಡಳಿತ ಇರುವಲ್ಲಿ ಎನ್ ಆರ್ ಸಿ ಇರುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ತಾವು ಹೇಳಬೇಕೆಂದು ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದರು.

ಪ್ರಶಾಂತ್ ಕಿಶೋರ್ ರ ಬಲವಾದ ವಿರೋಧದಿಂದ ಬಿಜೆಪಿ ಸಖ್ಯ ಪಕ್ಷವಾಗಿಯೂ ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ ಆರ್ ಸಿ ವಿರೋಧಿಸಿ ಹೇಳಿಕೆ ನೀಡಿದ್ದಾರೆ.