ಅಗ್ನಿವೀರರಿಗೆ ಒಂದು ಕೋಟಿ ನೀಡಿದ್ದೇವೆಂದು ರಾಜನಾಥ್ ಸಿಂಗ್ ಹೇಳಿದ್ದು ಸುಳ್ಳು: ಅಗ್ನಿವೀರ್ ತಂದೆಯ ವೀಡಿಯೊ ಹೊರಬಿಟ್ಟ ರಾಹುಲ್ ಗಾಂಧಿ

0
373

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು. 4: ವೀರಮೃತ್ಯು ಅಪ್ಪಿದ ಅಗ್ನಿವೀರ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ನೀಡಲಾಗಿದೆ ಎಂದು ರಕ್ಷಣ ಸಚಿವ ರಾಜ್‍ನಾಥ್ ಸಿಂಗ್ ಹೇಳಿಕೆ ಸುಳ್ಳು ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.

ಕೇಂದ್ರದ ಸರಕಾರ ಸುಳ್ಳು ಹೇಳಿದೆ ನಿಜ ಏನು ಎಂಬುದನ್ನು ವೀರ ಮೃತ್ಯುವನ್ನಪ್ಪಿದ ಅಗ್ನಿವೀರ ವಿಜಯ್ ಸಿಂಗ್‍ರ ತಂದೆ ತನ್ನಲ್ಲಿ ಹೇಳಿರುವುದನ್ನು ವೀಡಿಯೊ ಸಂದೇಶದಲ್ಲಿ ಹೊರಗೆಡಹಿದ್ದಾರೆ.

ದೇಶದೊಂದಿಗೆ , ಪಾರ್ಲಿಮೆಂಟಿನೊಂದಿಗೆ ಮತ್ತು ಸೈನ್ಯದೊಂದಿಗೆ ರಕ್ತಸಾಕ್ಷಿ ಅಗ್ನಿವೀರ್ ಅಜಯ್ ಸಿಂಗ್ ಕುಟುಂಬದೊಂದಿಗೆ ಅಗ್ನಿವೀರರೊಂದಿಗೆ ಯುವಕರೊಂದಿಗೆ ಸುಳ್ಳು ಹೇಳಿದ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಕ್ಷಮೆ ಕೇಳಬೇಕು. ಸತ್ಯದ ಸಂರಕ್ಷಣೆಯನ್ನು ಎಲ್ಲ ಧರ್ಮಗಳ ಅಡಿಪಾಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಸೈನಿಕರನ್ನು ಎರಡು ರೀತಿಯಲ್ಲಿ ವಿಭಜಿಸಿದ ಅಗ್ನೀವೀರ್ ಐದು ವರ್ಷ ಆದ ಮೇಲೆ ಹೊರಗೆಸೆಯುವ ಯೂಸ್ ಆಂಡ್ ತ್ರೋ ಯೋಜನೆ ಆಗಿದೆಯೆಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು. ಕೇವಲ ಆರು ತಿಂಗಳ ತರಬೇತಿ ನೀಡಿ, ಐದು ವರ್ಷ ತರಬೇತಿ ಪಡೆದಿರುವ ಚೈನೀಸ್‌ ಸೈನಿಕರ ಮುಂದೆ ಅವರನ್ನು ಕಳುಹಿಸುವುದೆಂದು ರಾಹುಲ್ ಗಾಂಧಿ ಬೆಟ್ಟು ಮಾಡಿದರು.

ರಾಹುಲ್ ಗಾಂಧಿಯವರ ಆರೋಪವನ್ನು ವಿರೋಧಿಸಿದ ರಾಜ್‍ನಾಥ್ ಸಿಂಗ್ ರಾಹುಲ್ ಸುಳ್ಳು ಹೇಳುತ್ತಿದ್ದಾರೆ, ಒಂದು ಕೋಟಿ ನಾವು ಕೊಡುತ್ತೇವೆ ಎಂದಿದ್ದರು. ಇದರ ವಾಸ್ತವವನ್ನು ರಾಹುಲ್ ಗಾಂಧಿ ವೀಡಿಯೊ ಮೂಲಕ ಬಹಿರಂಗಪಡಿಸಿದ್ದಾರೆ.