ಪ್ರಿಯಾಂಕಾ ಚತುರ್ವೇದಿಯ ಬಳಿಕ ಸಂಸದ್ ಟಿವಿಗೆ ಶಶಿ ತರೂರ್ ರಾಜೀನಾಮೆ

0
273

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ಹಿರಿಯ ನಾಯಕ ಶಶಿತರೂರ್ ಸೋಮವಾರ ಸಂಸದ್ ಟಿವಿಗೆ ರಾಜೀನಾಮೆ ನೀಡಿದರು. ರಾಜ್ಯಸಭಾ ಅಮಾನತು ಘಟನೆಯ ನಂತರ ತರೂರ್ ಈ ತೀರ್ಮಾನ ಕೈಗೊಂಡಿದ್ದಾರೆ. ಇದಕ್ಕಿಂತ ಮೊದಲು ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ ರವಿವಾರ ಸಂಸದ್ ಟಿವಿ ಕಾರ್ಯಕ್ರಮ ಮೇರಿ ಕಹಾನಿಯ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು.

ಹನ್ನೆರಡು ಸಂಸದರನ್ನು ಆಗಸ್ಟ್‌ನಲ್ಲಿ ಈ ಹಿಂದಿನ ಮಳೆಗಾಲ ಅಧಿವೇಶನದಲ್ಲಿ ಕೆಟ್ಟ ನಡವಳಿಕೆ ಆರೋಪಿಸಿ ಪೂರ್ಣ ಚಳಿಗಾಲದ ಅಧಿವೇಶನಕ್ಕೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಹನ್ನೆರಡು ಸಂಸದರಲ್ಲಿ ಆರು ಮಂದಿ ಕಾಂಗ್ರೆಸ್ ಸಂಸದರಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು ಮತ್ತು ಸಿಪಿಎಂ ಮತ್ತು ಸಿಪಿಐ ಪಾರ್ಟಿಯ ತಲಾ ಒಬ್ಬರು ಸದಸ್ಯರು ಅಮಾನತುಗೊಂಡವರಲ್ಲಿ ಸೇರಿದ್ದಾರೆ.