ಸನ್ಮಾರ್ಗ ವಾರ್ತೆ
ತಾಯಿಯ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ ಪುಟ್ಟ ಮಗುವನ್ನೇ ಬಲಿ ನೀಡಿದ ಧಾರುಣ ಘಟನೆ ಉತ್ತರ ಪ್ರದೇಶದ ಮುಜಫರ್ ನಗರ ಸಮೀಪದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಮಮತಾ ಮತ್ತು ತಂದೆ ಗೋಪಾಲ್ ಕಶ್ಯಪ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಗುವಿನ ತಾಯಿ ದೀರ್ಘಕಾಲದಿಂದ ಅನಾರೋಗ್ಯದಲ್ಲಿದ್ದಳು. ಮಗುವನ್ನು ಬಲಿ ನೀಡಿದರೆ ಕಾಯಿಲೆಯಿಂದ ಗುಣಮುಖವಾಗಬಹುದು ಎಂದು ಮಂತ್ರವಾದಿಯೊಬ್ಬ ಸಲಹೆ ನೀಡಿದ್ದ. ಆ ಬಳಿಕ ಮಗುವನ್ನು ಕೊಂದು ಮೃತ ದೇಹವನ್ನು ಕಾಡಿಗೆ ಎಸೆಯಲಾಯಿತು ಎಂದು ಈ ದಂಪತಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರೊಂದಿಗೆ ಈ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ.
ಒಂದು ವರ್ಷದ ಮಗುವನ್ನು ಹೀಗೆ ಬಲಿ ನೀಡಲಾಗಿದೆ. ಮಗು ಕಾಣದೆ ಇರುವುದರಿಂದ ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಮಗುವನ್ನು ಬಲಿ ನೀಡುವುದಕ್ಕೆ ಪ್ರೇರೇಪಿಸಿದ ಮಂತ್ರವಾದಿ ಹರೇಂದ್ರನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.